ಚಳ್ಳಕೆರೆ-11: ನಗರದ ಮೂಲಕ ತುಮಕೂರಿಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿ ಮತ್ತು ಚಾಲಕನನ್ನು ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನೆಹರು ವೃತ್ತದ ಬಳಿ ಸದರಿ ವಾಹನವನ್ನು ಪರಿಶೀಲಿಸಲಾಗಿ ವಾಹನದಲ್ಲಿ 12 ಟನ್ ಅಕ್ಕಿ ಇರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಡ್ರೈವರನ್ನು ವಿಚಾರಣೆ ಮಾಡಲಾಗಿ ಸದರಿ ವಾಹನದಲ್ಲಿ ಇರುವ ಅಕ್ಕಿಯ ವಿವರ ನನಗೆ ತಿಳಿದಿಲ್ಲವೆಂದು ಮತ್ತು ವಾಹನದ ಮಾಲೀಕರು ಗೊತ್ತಿಲ್ಲವೆಂದು ಹೇಳಿದ ಮೇಲೆ ಸದರಿ ವಾಹನ ಮತ್ತು ಚಾಲಕನನ್ನು ದಸ್ತಗಿರ್ ಮಾಡಿ ಪ್ರಕರಣವನ್ನು ದಾಖಲಿಸಲಾಗಿದೆ.
[t4b-ticker]
+ There are no comments
Add yours