ಚಿತ್ರದುರ್ಗ:ಯಡಿಯೂರಪ್ಪ ರಂತೆ ಚೆಕ್ ಮೂಲಕ ಲಂಚ ತೆಗೆದುಕೊಂಡು ಕುಖ್ಯಾತರಾಗಿಲ್ಲ ಯುವ ನಾಯಕ ರಾಹುಲ್ ಗಾಂಧಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದರು.( chitrdaurga)
ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾಗವಹಿಸಿದ ಅವರು ಗಿರಿಯಮ್ಮನಹಳ್ಳಿ ಬಳಿ ಮಾತನಾಡಿದ ಅವರು, ರಾಹುಲ್ ಗಾಂಧಿ ಬಚ್ಚಾ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು. B.k.Hariprasad
ಮೀಸಲಾತಿಯ ಧರಣಿ ಕೈ ಬಿಡಲ್ಲ ಅಂತ ವಾಲ್ಮೀಕಿ ಶ್ರೀ ಹೇಳಿದ್ದೇಕೆ!
ಸಿಎಂ ಸ್ಥಾನ ಕಳೆದುಕೊಂಡ ಯಡಿಯೂರಪ್ಪಗೆ ಬುದ್ಧಿ ಭ್ರಮಣೆಯಾಗಿದೆ. ಅವರು
ಸವಕಲು ನಾಣ್ಯವಾಗಿ ಬಿಜೆಪಿ ಪಕ್ಷದಲ್ಲಿದ್ದಾರೆ. ರಾಹುಲ್ ಗಾಂಧಿ ಟೀಕಿಸಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ. ಮುಸ್ಸಂಜೆಯ ರಾಜಕೀಯದಲ್ಲಿ ಇರುವ ಯಡಿಯೂರಪ್ಪ ಅವರು ಈ ರೀತಿಯ ಹೇಳೆಕೆ ಶೋಭೆತರಲ್ಲ ಎಂದು ತಿಳಿಸಿದರು. (challakere)
ಮೋದಿ ಪಾದ ಧೂಳಿಗೂ ಸಿದ್ಧರಾಮಯ್ಯ ಸಮ ಅಲ್ಲ ಎಂದು ಹೇಳಿರುವ ಯಡಿಯೂರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಬಿಎಸ್ ವೈ ಎಷ್ಟು ಧೂಳು ಕುಡಿದಿದ್ದಾರೆ ಎಂಬುದು ಗೊತ್ತಿದೆ.ಅವರ ಭಟ್ಟಂಗಿತನದಿಂದ ಕೆಳ ಮಟ್ಟಕ್ಕಿಳಿಯುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ
ಯಡಿಯೂರಪ್ಪ ಹಿಂದೆ ಇಡಿ, ಐಟಿ ಇದೆ ಅಲ್ಲಿ ಕೇಸ್ ಗಳಿವೆ. 8ವರ್ಷದಿಂದ ಬೂಟಾಟಿಕೆ ದಾಸಯ್ಯರಂತೆ ಬಡಿದುಕೊಳ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಹಗರಣ ನಡೆದಿದ್ದರೆ ಬಯಲು ಮಾಡಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಅಂತಹವರನ್ನು ನಾವು ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಜೈಲಿಗೆ ಕಳಿಸುತ್ತೇವೆ ಎಂದು ತಿಳಿಸಿದರು.
ರಾಹುಲ್ ಗಾಂಧಿಗೆ ಬಳ್ಳಾರಿ ಏಕೆ ನೆನಪಾಯಿತು ಎಂದು ಶ್ರೀರಾಮುಲುಗೆ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಬಳ್ಳಾರಿಗೆ ಬಂದು ಲೂಟಿ ನಿಲ್ಲಿಸಿದ್ದೆವು, ಅದಕ್ಕೆ ಈಗ ಮತ್ತೇನು ಮಾಡ್ತಾರೋ ಅಂತ ಭಯ ಅವರಿಗಿದೆ ಎಂದು ಹೇಳಿದರು.
[t4b-ticker]
+ There are no comments
Add yours