ರಾಜ್ಯ ಸುದ್ದಿ : state news:ಅ:13: (Yashavini Yojana)ಗ್ರಾಮೀಣ ಮತ್ತು ಪ್ರದೇಶದ ಸಹಕಾರಿಗಳಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಈ ಹಿಂದೆ ಬಡವರ ಪಾಲಿನ ಆಶಾಕಿರಣವಾಗಿ ಜಾರಿಯಲ್ಲಿದ್ದ ಜನಪ್ರಿಯ ಯೋಜನೆಯಾದ ಯಶಸ್ವಿನಿ ಯೋಜನೆಯನ್ನು ಈಗ ಮರು ಜಾರಿಗೊಳಿಸಿದ್ದು, ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಅಲ್ಲದೆ ನವೆಂಬರ್ 1ರಿಂದಲೇ ಸದಸ್ಯರ ನೋಂದಣಿ ಕಾರ್ಯ ಆರಂಭವಾಗಲಿದೆ.Yashavini Yojana
ಈ ಕುರಿತಂತೆ ಬುಧವಾರದಂದು ಸರ್ಕಾರಿ ಆದೇಶ ಹೊರ ಬಿದ್ದಿದ್ದು, ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ 500 ರೂಪಾಯಿ, ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂಪಾಯಿ ವಂತಿಗೆಯನ್ನು ನಿಗದಿಪಡಿಸಲಾಗಿದೆ.(Yashavini Yojana)
ಸಿಹಿ ಸುದ್ದಿ: 1137 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಒಂದು ವೇಳೆ ನಾಲ್ಕು ಜನರಿಗಿಂತ ಹೆಚ್ಚಿನ ಕುಟುಂಬ ಸದಸ್ಯರಿದ್ದ ಪಕ್ಷದಲ್ಲಿ ಹೆಚ್ಚುವರಿ ಸದಸ್ಯರಿಗೆ ತಲಾ 200 ರೂಪಾಯಿ ವಂತಿಕೆ ಹಣ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಬಂದ ಸಂದರ್ಭದಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗಿನ ಚಿಕಿತ್ಸೆಯನ್ನು ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಚಿಕಿತ್ಸೆ( Yashavini Yojana )ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣೆ ಬಂದಾಗ ಬಿಜೆಪಿಗೆ ದಲಿತರು ನೆನಪಾಗುತ್ತೆ: ಮಾಜಿ ಸಿಎಂ ಸಿದ್ದರಾಮಯ್ಯ
[t4b-ticker]
+ There are no comments
Add yours