ಚಿತ್ರದುರ್ಗ:(chitrdaurga) ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದಲ್ಲಿ ಬುಧವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಗ್ರಾಮದ ಕಣಿವೆ ಮಾರಮ್ಮ ದೇಗುಲದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಅದ್ಧೂರಿಯಾಗಿ ನಡೆಯಿತು.
ಬಚ್ಚಬೋರನಹಟ್ಟಿ ಗ್ರಾಮದ ಬಸವಣ್ಣ ದೇಗುಲದಿಂದ ಆರಂಭವಾದ ಮೆರವಣೆಗೆಗೆ ಗ್ರಾಮದ ಮಹಿಳೆಯರು ಚಾಲನೆ ನೀಡಿದರು.(Valmiki Jayanti)
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಬಿ.ಕೃಷ್ಣಮೂರ್ತಿ, ಗ್ರಾಮಸ್ಥರಾದ ಪೂಜಾರಿ ಮುತ್ತಯ್ಯ, ಬೋರಯ್ಯ, ಬೈಯಣ್ಣ, ಈರೋಬಯ್ಯ, ಬಿ.ಪಿ.ಪಾಪಯ್ಯ, ಸಾಹುಕಾರ್ ನಾಗರಾಜ್, ಆರ್.ಪಿ.ಗೋಪಾಲ, ಬಸವರಾಜ್ ಸೇರಿದಂತೆ ಮತ್ತಿತರರು ಇದ್ದರು.(Valmiki Jayanti)
[t4b-ticker]
+ There are no comments
Add yours