ಚಿತ್ರದುರ್ಗ: 2022ನೇ ವರ್ಷ ನಡೆದಂತಹ ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಈ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿ ಪ್ರತಿಯೊಂದು ಸಹಕಾರವನ್ನು ನೀಡಿ ವರ್ಗಾವಣೆ ಆಗಿರುವ ತಹಶೀಲ್ದಾರ್ ಎನ್ .ರಘುಮೂರ್ತಿ ಅವರ ಕಾರ್ಯ ಶ್ಲಾಘನೀಯ ಮತ್ತು ಅನನ್ಯವಾದದ್ದು ಎಂದು ತಾಲೂಕು ಭಜರಂಗದಳದ ಅಧ್ಯಕ್ಷ ಡಾಕ್ಟರ್ ಮಂಜುನಾಥ್ ಹೇಳಿದರು.
ಅವರು ಇಂದು ತಾಲೂಕ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಹಾಗೂ ವಿಶ್ವ ಎಂದು ಮಹಾ ಗಣಪತಿ ಆಯೋಜನೆ ಸಮಿತಿ ಕಾರ್ಯಕರ್ತರೊಂದಿಗೆ ಎನ್ ರಘುಮೂರ್ತಿ ಅವರ ನಿವಾಸದಲ್ಲಿ ಅವರನ್ನು ಸನ್ಮಾನಿಸಿ ಗೌರವಪೂರ್ವಕವಾಗಿ ಮಾತನಾಡಿ ಭಾರತ ಧಾರ್ಮಿಕ ಪರಂಪರೆ ಮತ್ತು ಆಧ್ಯಾತ್ಮಿಕ ಇತಿಹಾಸಕ್ಕೆ ಸಾಕ್ಷಿಕರಿಸಿದಂತ ದೇಶ ಈ ದೇಶದಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಗಳು ದೇವತಾ ಕಾರ್ಯಗಳು ಮತ್ತು ದೇಶ ಮತ್ತು ರಾಷ್ಟ್ರವನ್ನು ಪ್ರತಿಬಿಂಬಿಸುವಂತಹ ಅನೇಕ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ನನ್ನ ದೇಶ ನನ್ನ ರಾಷ್ಟ್ರ ಎನ್ನುವ ಪರಿಕಲ್ಪನೆಯಲ್ಲಿ ಈ ಕಾರ್ಯಗಳಲ್ಲಿ ಭಾಗಿಯಾಗುವಂತ ಅಧಿಕಾರಿಗಳು ತುಂಬಾ ವಿರಳ ಇಂತಹ ಸಂದರ್ಭದಲ್ಲಿ ಕೂಡ ವಿಶ್ವ ಹಿಂದೂ ಮಹಾ ಗಣಪತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಮೊದಲನೇ ದಿನದಿಂದ ಶೋಭ ಯಾತ್ರೆಯವರೆಗೆ ನಿರಂತರವಾಗಿ ಕಾರ್ಯಕ್ರಮಕ್ಕೆ ತಮ್ಮ ಅಮೂಲ್ಯ ಸಹಕಾರವನ್ನು ನೀಡಿ ದೇವತಾ ಕಾರ್ಯಗಳಿಗೆ ತಮ್ಮ ಭಕ್ತಿಯ ಮೂಲಕ ಕಾಣಿಕೆ ನೀಡಿದ್ದಾರೆ.
ಈ ಸೇವೆಯನ್ನು ಗಮನದಲ್ಲಿಟ್ಟುಕೊಂಡು ತಾಲೂಕ್ ವಿಶ್ವವಿಂದ ಪರಿಷತ್ ಭಜರಂಗದಳ ಮತ್ತು ವಿಶ್ವ ಎಂದು ಮಹಾ ಗಣಪತಿ ಸಮಿತಿಯಿಂದ ಶ್ರೀ ಕೃಷ್ಣನ ವಿಗ್ರಹವನ್ನು ನೀಡಿ ಇವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಮುಂದೆಯೂ ಇಂತಹ ಸತಕಾರ್ಯಗಳನ್ನು ಸಮಾಜದಲ್ಲಿ ಮಾಡುವಂತೆ ಇವರಿಗೆ ಶಕ್ತಿಯನ್ನು ಈ ವಿಘ್ನ ವಿನಾಯಕನು ನೀಡಲೆಂದು ಹಾರೈಸಿದರು.
ಈ ಸಮಾರಂಭದಲ್ಲಿ ವಿಶ್ವ ಹಿಂದೂ ಮಹಾಗಣಪತಿ ಸಮಿತಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಮುಖಂಡರಾದ ಮಾತೃಶ್ರೀ ಮಂಜುನಾಥ್, ಯೋಗೇಶ್ ,ನಾಗೇಶ್, ಭೋವಿ ಸಮಾಜದ ಮುಖಂಡರಾದ ಜಗದೀಶ್, ಚಿದಾನಂದ, ಕಣ್ಣೀರಪ್ಪ, ಕೃಷ್ಣ, ರವಿ ,ಮಹಾಂತೇಶ್ , ಕರಿಬಸವ ಚೆನ್ನಯ್ಯ ಸಿದ್ದು ರಾಮು ಓಬಣ್ಣ ಮೀರಾಸಾಬಿಹಳ್ಳಿ ನಾಗರಾಜು ಮಾರುತಿ ಮುಂತಾದವರು ಉಪಸ್ಥಿತರಿದ್ದರು..
[t4b-ticker]
+ There are no comments
Add yours