ಭರಮಸಾಗರ ಕೆರೆ ಏರಿ ಬಿರುಕು ಸ್ಥಳಕ್ಕೆ ತಹಶೀಲ್ದಾರ್ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ

 

 

 

 

ಚಿತ್ರದುರ್ಗ: ತುಂಗಭದ್ರಾ ನೀರು ತರಿಸಿಕೊಂಡು ಒಡಲು ತುಂನಿಕೊಂಡ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕನ ಕೆರೆ ಏರಿಯ ಕೆಳ ರಸ್ತೆಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು  ಸ್ಥಳಕ್ಕೆ ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

ಕೆರೆ ಏರಿಯ ಬಿರುಕಿನ ಬಗ್ಗೆ  ಸಂಬಂಧಿಸಿದ ಇಲಾಖೆ ಅವರು ಸೂಕ್ತ ಪರಿಶೀಲನೆ ನಡೆಸಿ ಪರಿಹಾರ ಒದಗಿಸುತ್ತಾರೆ. ಇಲ್ಲಿ ಸಂಪೂರ್ಣ ವರದಿ ಪಡೆದುಕೊಂಡಿದ್ದು  ಜಿಲ್ಲಾಧಿಕಾರಿ ಅವರಿಗೆ ನೀಡಲಾಗುವುದು. ಕೆರೆ ತುಂಬಿದ್ದು ಕೆರೆಯ ಸುತ್ತಮುತ್ತಲೂ ಎಚ್ಚರಿಕೆ ವಹಿಸಬೇಕು. ಜನರು‌ ಜಾಗೃತಿ ವಹಿಸಬೇಕು.ಹೆಚ್ಚು ಕೆರೆ ಏರಿಯ ಮೇಲೆ ವಾಹನಗಳನ್ನು ತೆಗೆದುಕೊಂಡು ಹೋಗುವುದು ನಿಲ್ಲಿಸಬೇಲು. ಇಂಜಿನಿಯರ್ ಮತ್ತು ಕೆರೆ ಏರಿಯ ತಜ್ಞರ ತಂಡ ಎಲ್ಲಾ ವಿಕ್ಷಣೆ ಮಾಡಿ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಮಾಡತ್ತದೆ‌ ಮತ್ತು ಜನರು ಆತಂಕಕ್ಕೆ ಒಳಗಾಗಬೇಕಿ ಎಂದು‌ ತಿಳಿಸಿದರು.

[t4b-ticker]

You May Also Like

More From Author

+ There are no comments

Add yours