ಚಳ್ಳಕೆರೆ: ಪಟ್ಟಣದ ಶಾಂತಿನಗರದಲ್ಲಿರುವ ಮಂಜುನಾಥ ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿ ನಕಲಿ ಮತದಾರ ಗುರುತಿನ ಚೀಟಿ ಮುದ್ರಿಸುತ್ತಿದ್ದ ಜಾಲವನ್ನು ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ಎನ್ ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ ಮಾಧ್ಯಮದೊಂದಿಗೆ ಮಾತನಾಡಿ ಇವರು ಅನಧಿಕೃತವಾಗಿ ದುಪ್ಪಟ್ಟು ಹಣಕ್ಕೆ ನಕಲಿ ಮತದಾರರ ಕಾರ್ಡುಗಳನ್ನು ಮುದ್ರಿಸಿ ನಕಲಿ ಸಹಿ ಸೃಷ್ಟಿಸಿ, ಮುಗ್ಧ ಜನರನ್ನು ವಂಚಿಸಿದ್ಧಾರೆ ದಾಳಿಯ ವೇಳೆ ಸುಮಾರು 20 ಮುದ್ರಿತ ಕಾರ್ಡುಗಳು ದೊರೆತಿವೆ ಮತದಾರರ ಪಟ್ಟಿಯಲ್ಲಿ ಮುದ್ರಿತ ಕಾರ್ಡ್ ನಲ್ಲಿರುವವರ ಹೆಸರಿದೆ ಕಾರ್ಡ್ ವಿತರಿಸುವುದು ಚುನಾವಣಾ ಆಯೋಗದ ಕೆಲಸವಾಗಿದೆ ಆಯೋಗ ಸಂಬಂಧಪಟ್ಟ ಏಜೆನ್ಸಿಗೆ ಪರವಾನಿಗೆ ನೀಡಿ ಮುದ್ರಿಸಲು ಅವಕಾಶ ನೀಡಿರುತ್ತದೆ ಇಂತಹ ನಕಲಿ ದಾರದಿಂದ ಚುನಾವಣಾ ಆಯೋಗಕ್ಕೆ ಕೆಟ್ಟ ಹೆಸರು ಬರುತ್ತದೆ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಅವರ ಆದೇಶದಂತೆ ಅಂಗಡಿಯನ್ನು ಮುಚ್ಚಿಸಿ ಮಾಲೀಕರನ್ನು ರಸ್ತಗಿರಿ ಮಾಡಿ ವಶಕ್ಕೆ ಪಡೆಯಲಾಗಿದೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಇಂತಹ ಪ್ರಕರಣಗಳು ಮುಂದೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ದಾಳಿಯ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
[t4b-ticker]
+ There are no comments
Add yours