ಕೋಟೆ ನಾಡಿಗೆ ರಾಹುಲ್ ಗಾಂಧಿ ಹಿರಿಯೂರಿನಲ್ಲಿ ಭವ್ಯ ಸ್ವಾಗತ

 

 

 

 

ಹಿರಿಯೂರು : ಲೋಕಸಭಾ ಸದಸ್ಯರು ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ತಮ್ಮ ಭಾರತ್ ಜೋಡೋ ಯಾತ್ರೆಯೊಂದಿಗೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿಗೆ ಆಗಮಿಸಿದಾಗ ಭವ್ಯವಾದ ಸ್ವಾಗತವನ್ನು ಕೋರಲಾಯಿತು. ಇಲ್ಲಿನ ಹುಳಿಯಾರು ರಸ್ತೆಯಿಂದ ರಾಹುಲ್ ಗಾಂಧಿಯವರು ಹೆಜ್ಜೆ ಹಾಕುತ್ತಿದ್ದ ಹಾಗೇ ಸಾವಿರಾರು ಜನ ಸ್ತೋಮ ಜಮಾಯಿಸಿ ಕಾಂಗ್ರೆಸ್ ಬಾವುಟಗಳನ್ನು ಹಿಡಿದು ಬೋಲೋ ಭಾರತ್ ಮಾತಾ ಕಿ ಜೈ ಕಾಂಗ್ರೆಸ್ ಪಾರ್ಟಿಗೆ ಜೈ ರಾಹುಲ್ ಗಾಂಧಿ ಕಿ ಜೈ ಎಂದು ಹರ್ಷೋದ್ಗಾರ ಕೂಗುವ ದೃಶ್ಯ ಕಂಡು ಬಂತು.ಗೊರವರ ಕುಣಿತ ವಿವಿಧ ವಾದ್ಯ ಸಂಗೀತಗಳೊಂದಿಗೆ ಜನ ಕುಣಿದು ಕುಪ್ಪಳಿಸಿದರು. ದಾರಿ ಯುದ್ಧಕ್ಕೂ ಅಂಗಡಿಗಳು ಮನೆಗಳ ಹೊರ ಭಾಗದಲ್ಲಿ ಮಹಡಿಗಳ ಮೇಲೆ ಸಾವಿರಾರು ಜನರು ನೆರೆದಿದ್ದು ರಾಷ್ಟ್ರ ನಾಯಕ ರಾಹುಲ್ ಗಾಂಧಿಯವರನ್ನು ನೋಡಲು ಕಾತುರದಿಂದ ವೀಕ್ಷಿಸಿದರು. ಚಿತ್ರದುರ್ಗ ಜಿಲ್ಲೆಯ ಸಾವಿರಾರು ಜನ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದರು. ಹಿರಿಯೂರು ನಗರದಿಂದ ಹುಳಿಯಾರು ರಸ್ತೆ ಪ್ರಧಾನ ರಸ್ತೆಯ ಮೂಲಕ ಇಂದು ವಾಸ್ತವ್ಯ ಇರುವ ಹರ್ತಿಕೋಟೆಗೆ ಭಾರತ್ ಜೋಡೋ ಪಾದಯಾತ್ರೆ ಮುಂದುವರೆಯಿತು.

 

 

[t4b-ticker]

You May Also Like

More From Author

+ There are no comments

Add yours