ಚಿತ್ರದುರ್ಗ (ಚಳ್ಳಕೆರೆ): ಎಣ್ಣೆ ನಗರಿ ಮತ್ತು ವಿದ್ಯಾ ನಗರಿ ಎಂಬ ಖ್ಯಾತಿಯ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ವಿಧಾನ ಸಭಾ ಕಾವು ಜೋರಾಗುತ್ತಿದೆ.ಹಾಲಿ ಕಾಂಗ್ರೆಸ್ ಶಾಸಕ ಟಿ.ರಘುಮೂರ್ತಿ ವಿರುದ್ಧ ಸೆಣಸಲು ಸ್ಥಳೀಯ ಅಭ್ಯರ್ಥಿಗಳಿಗಳಾದ ಬಾಳೆಕಾಯಿ ರಾಮದಾಸ್, ಪಕ್ಷೇತರಾಗಿ ಗುರುತಿಸಿಕೊಳ್ಳತ್ತಿರುವ ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ಮಗ ಕೆ.ಟಿ.ಕುಮಾರಸ್ವಾಮಿ ಜೊತೆಗೆ ಜಯಪಾಲಯ್ಯ ಪ್ರಬಲ ಆಕಾಂಕ್ಷಿಗಳಾಗಿದ್ದರು ಸಹ ಇವರಿಗೆ ಶಾಸಕ ರಘುಮೂರ್ತಿ ಅವರಿಗೆ ಪೈಪೋಟಿ ನೀಡಲಾರರು ಎಂಬ ಮಾತು ಚಳ್ಳಕೆರೆ ವಲಯದಲ್ಲಿ ಕೇಳಿ ಬರುತ್ತಿದೆ.ಆದರೆ ಮೊಳಕಾಲ್ಮುರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್ ಎಂಬ ಗುಸು ಗುಸು ಚರ್ಚೆ ನಡುವೆಯೇ ಅನಿಲ್ ಕುಮಾರ್ ಚಳ್ಳಕೆರೆ ಬಿಜೆಪಿ ಟಿಕೆಟ್ ಗೆ ಲಾಭಿ ಮಾಡುತ್ಯಿದ್ದರಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ಯಿದೆ. ಅನಿಲ್ ಕುಮಾರ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತುಮಕೂರು ವಿಧಾನ ಪರಿಷತ್ ಅಭ್ಯರ್ಥಿ ಆಗಿ ಸೋಲು ಅನುಭವಿಸಿದ್ದರು. ಮೂಲತಃ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು. ಆದರೆ ಏಕೋ ಮೊಳಕಾಲ್ಮುರು ಕ್ಷೇತ್ರ ಸುತ್ತಾಡಿ ಚಳ್ಳಕೆರೆ ಬಿಜೆಪಿ ಟಿಕೆಟ್ ಗೆ ರಾಜ್ಯ ಮಟ್ಟದ ಮುಖಂಡರ ಮತ್ತು ಆರ್ ಎಸ್ಎಸ್ ಮುಖಂಡರ ಜೊತೆ ಸಂಪರ್ಕದಲ್ಲಿದ್ದು ಬಿಜೆಪಿ ಟಿಕೆಟ್ ನೀಡಬಹುದು ಎಂಬ ಲೆಕ್ಕಚಾರ ಅನಿಲ್ ಅವರದು ಆದರೆ ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿ ಇರುವ ಬಿಜೆಪಿ ಯಾರಗೆ ಟಿಕೆಟ್ ನೀಡುತ್ತಾರೆ ಎನ್ನು ವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
[t4b-ticker]
+ There are no comments
Add yours