ನಗರದ ಸೌಂದರ್ಯ ಹೆಚ್ಚಿಸಲು ಅಲಂಕಾರಿಕ ಬೀದಿ ದೀಪ ಅಳವಡಿಕೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ:ಜು:2: ನಗರದ ನೀಲಕಂಠೇಶ್ವರ ದೇವಸ್ಥಾನ   ಮತ್ತು ಶಾರದಮ್ಮ  ಕಲ್ಯಾಣ ಮಂಟಪದ ಮುಂಭಾಗದಲ್ಲಿ  ನೂತನವಾಗಿ ನಿರ್ಮಿಸಲಾಗಿರುವ ಅಲಂಕಾರಿಕ ಬೀದಿ ದೀಪಗಳನ್ನು  ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಸ್ವಿಚ್ ಅನ್ ಮಾಡುವ  ಉದ್ಘಾಟಿಸಿದರು. 

 

 

ಈ ಸಂದರ್ಭದಲ್ಲಿ ಮಾತನಾಡಿ ನಗರದ ಎಲ್ಲಾ ಮುಖ್ಯ ರಸ್ತೆಗಳಿಗೆ ಅಲಂಕಾರಿಕ ಬೀದಿ ದೀಪವನ್ನು ಹಾಕಲಾಗುತ್ತಿದೆ. ಚಳ್ಳಕೆರೆ ರಸ್ತೆಯಿಂದ ಪ್ರವಾಸಿ ಮಂದಿರದವರೆಗೆ  ಮತ್ತು ಜಿಲ್ಲಾಧಿಕಾರಿ ವೃತ್ತದಿಂದ ಮದಕರಿನಾಯಕ ವೃತ್ತದವರಗೂ ಅಳವಡಿಸಿ ಚಾಲನೆ ಮಾಡಲಾಗಿದ್ದು   ಇಂದು ಸಹ ಪ್ರವಾಸಿ ಮಂದಿರದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನೂತನವಾಗಿ ಅಳವಡಿಸಲಾಗಿದ್ದ ಅಲಂಕಾರಿಕ ಬೀದಿ ದೀಪ ಅಳವಡಿಸಿ ಚಾಲನೆ ನೀಡಲಾಗಿದೆ. ನಗರ ಸುಂದರವಾಗಿ ಕಾಣಬೇಕೆನ್ನುವ ದೃಷ್ಟಿಯಿಂದ ಎಕ್ಸ್ ಆಕಾರದ ಅಲಂಕಾರಿಕ ದೀಪವನ್ನು ಹಾಕಲಾಗಿದ್ದು ನಗರಸಭೆ ಸಿಬ್ಬಂದಿಗಳು  ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್,   ನಗರಸಭೆ ಸದಸ್ಯರಾದ  ರಮೇಶ್,ಮಲ್ಲಿಕಾರ್ಜುನ್, ಮುಖಂಡರಾದ  ಪರಮೇಶ್, ರವಿಕುಮಾರ್  ಹಾಗೂ ಪಿಡ್ಲ್ಯೂಡಿ ಇಂಜಿನಿಯರ್ ಗೋಪಾಲ್, ನಗರಸಭೆ ಇಂಜಿನಿಯರ್ ಕಿರಣ್  ಇದ್ದರು.
[t4b-ticker]

You May Also Like

More From Author

+ There are no comments

Add yours