ಚಿತ್ರದುರ್ಗ:ನಗರ ಐತಿಹಾಸಿಕ ಮುರುಘಾ ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿ ನೇಮಿಸಿದ ಹೈಕೋರ್ಟ್ ಆದೇಶ ಹಿನ್ನಲೆಯಲ್ಲಿ ಇಂದು ಚಿತ್ರದುರ್ಗದ ಪ್ರಧಾನ ಮತ್ತು ಸೆಷನ್ಸ್ ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಮನಗೂಳಿ ಎಂ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು.
ಇಂದು 11-30 ಕ್ಕೆ ಮುರುಘಾ ಮಠಕ್ಕೆ ಆಗಮಿಸಿದ ಇವರು ಆಡಳಿತ ಕಚೇರಿಗೆ ತೆರಳವುದಕ್ಕಿಂತ ಮೊದಲು ಮಠದ ಕರ್ತೃ ಗದ್ದಿಗೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಆಡಳಿತ ಕಚೇರಿಗೆ ಆಗಮಿಸಿದ ಇವರಿಗೆ ಮಾಜಿ ಆಡಳಿತಾಧಿಕಾರಿ ಪಿಎಸ್ ವಸ್ತ್ರದ್ ಅವರು ಅಧಿಕಾರ ಹಸ್ತಾಂತರಿಸಿದರು. ಹೈಕೋರ್ಟ್ ಆದೇಶದಂತೆ ತಾತ್ಕಾಲಿಕವಾಗಿ ಎಸ್ ಜೆಎಂ ವಿದ್ಯಾಪೀಠ,ಮುರುಘಾ ಮಠದ ಆಡಳಿತವನ್ನು ಇಂದಿನಿಂದ ಇವರು ನಿರ್ವಹಿಸಲಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾತನಾಡಿ ಹೈಕೋರ್ಟ್ ನಿರ್ದೇಶನದ ಮೇರೆಗೆ ಆಡಳಿತಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಹೈಕೋರ್ಟ್ ಮುಂದಿನ ಆದೇಶದವರೆಗೆ ಈ ಹುದ್ದೆ ನಿರ್ವಹಿಸುತ್ತೇನೆ ಎಂದು ನ್ಯಾಯಧೀಶೆ ಪ್ರೇಮಾವತಿ ಮನಗೂಳಿ ಎಂ ಅವರು ತಿಳಿಸಿದರು.
[t4b-ticker]
+ There are no comments
Add yours