ಶ್ರೀರಾಮುಲು ಗುಣಮುಖವಾಗಲಿ ಎಂದು ವಿಶೇಷ ಪೂಜೆ ಪ್ರಾರ್ಥನೆ

 

 

 

 

ಮೊಳಕಾಲ್ಮುರು: ಮೊಳಕಾಲ್ಮೂರು ಬಿಜೆಪಿ ವತಿಯಿಂದ ಜನಪ್ರಿಯ ಶಾಸಕರು ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ಬಿ ಶ್ರೀರಾಮುಲು ಅವರಿಗೆ ಕರೋನಾ ದೃಢಪಟ್ಟ ಹಿನ್ನೆಲೆ ಶೀಘ್ರವಾಗಿ ಗುಣಮುಖವಾಗಲಿ ಎಂದು ಈ ದಿನ ಮೊಳಕಾಲ್ಮುರಿನ ಮಾರ್ಕಂಡೇಯ ಸ್ವಾಮಿ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಮಾಡಲಾಯಿತು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ಮಂಡಲ ಅಧ್ಯಕ್ಷರು ಡಾ॥ ಪಿ ಎಮ್ ಮಂಜುನಾಥ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿಜಯ್ ಬಿ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭು ನೇರ್ಲಹಳ್ಳಿ , ಬಿಜೆಪಿ ಮುಖಂಡರಾದ ಪರಮೇಶ್ವರಪ್ಪ, ಶ್ರೀರಾಮ್ ರೆಡ್ಡಿ, ಸಿದ್ಧಾರ್ಥ, ಮಂಜುನಾಥ್, ಶಾಂತರಾಮ್, ರಘು, ಲಕ್ಷ್ಮಣ್, ಮುಂತಾದವರು ಇದ್ದರು.

 

 

ನಾಯಕನಹಟ್ಟಿ: ಸ್ವಾಭಿಮಾನ ಬಿ ಶ್ರೀರಾಮುಲು ಅವರಿಗೆ ಕರೋನ ಸೋಂಕು ದೃಢಪಟ್ಟಿದ್ದರಿಂದ ಗೌರಸಮುದ್ರ ಮಾರಿ ಮಹೇಶ್ವರಿ ದೇವಸ್ಥಾನದಲ್ಲಿ ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇವೆ. 51 ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸುರುತ್ತೇವೆ,ಈ ಸಂದರ್ಭದಲ್ಲಿ ಬಿಜೆಪಿ ನಾಯಕನಹಟ್ಟಿ ಮಂಡಲ ಅಧ್ಯಕ್ಷರು ಈ ರಾಮರೆಡ್ಡಿ ಹಾಗೂ ನಾಯಕನಹಟ್ಟಿ ಮಂಡಲ ಪ್ರದಾನ ಕಾರ್ಯದರ್ಶಿ ಡಿ ಆರ್ ಬಸವರಾಜು ಹಾಗೂ ಎಸ್ ಟಿ ಮೋರ್ಚಾ ಅಧ್ಯಕ್ಷರು ಮೋಹನ್,ಮಹಿಳಾ ಮೋರ್ಚಾ ಅಧ್ಯಕ್ಷರು ಸುನಂದಮ್ಮ ಹಾಗೂ ಪರಮೇಶ್ ಹಾಗೂ ಪ್ರಕಾಶ್ ರೆಡ್ಡಿ ಹಾಗೂ ಬಿ ಜೆ ಪಿ ಮುಖಂಡರು ಹಾಗೂ ಕಾರ್ಯಕರ್ತ ಬಂದುಗಳು ಎಲ್ಲರೂ ಹಾಜರಿದ್ದರು.
[t4b-ticker]

You May Also Like

More From Author

+ There are no comments

Add yours