ಚಿತ್ರದುರ್ಗ: ರೈತರಿಗೆ ಟೊಮೊಟೊ ಹಣ ನೀಡಿ ಇಲ್ಲವಾದರೆ ಮಾರ್ಕೆಟ್ ಮುಚ್ಚಿ ಎಂದು ಟೊಮೊಟೊ ಖರೀದಿದಾರರಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ ತಾಲೂಕಿನ ಬಳ್ಳಾರಿ ಮುಖ್ಯರಸ್ತೆಯ ಸಮೀಪ ಚಿಕ್ಕಮ್ಮನಹಳ್ಳಿ ಹತ್ತಿರ ಇತ್ತೀಚಿಗೆ ಪ್ರಾರಂಭವಾದ ಟೊಮೊಟೊ ಖರೀದಿ ಮಾರುಕಟ್ಟೆಯಲ್ಲಿ ರೈತರಿಂದ ಟೊಮೇಟೊ ಖರೀದಿ ಮಾಡಿಕೊಂಡ ಮಾರುಕಟ್ಟೆಯ ಖರೀದಿದಾರರು ರೈತರಿಗೆ ಹಣ ನೀಡಿಲ್ಲ ಇದರಿಂದ ರೈತರಿಗೆ ಮೋಸವಾಗುತ್ತಿದೆ ಎಂದು ರೈತ ಮುಖಂಡ ಕೆಪಿ ಬೂತಯ್ಯ ಹಾಗೂ ಟಮೋಟೊ ಕರಿದಿದಾರರು ತಹಶೀಲ್ದಾರ್ ಹಾಗೂ ತೋಟಗಾರಿಕೆ ಇಲಾಖೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಂದು ರೈತ ಮುಖಂಡ ಕೆಪಿ ಬೂತಯ್ಯ ಹಾಗೂ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್ ವಿರೂಪಾಕ್ಷಪ್ಪ ಹಾಗೂ ಕೆಲ ರೈತರು ಇಂದು ತಮಟೆ ಮಾರುಕಟ್ಟೆಗೆ ಭೇಟಿ ನೀಡಿ ಖರೀದಿದಾರರಿಗೆ ಎಚ್ಚರಿಕೆ ನೀಡಿರು.
ರೈರಿಂದ ಟೊಮ್ಯಾಟೊ ಖರೀದಿಸಿ ಅವರಿಗೆ ಹಣ ಕೋಡದೆ ಯಾಕೆ ಸತಯಿಸುತ್ತಿದ್ದರಿ.ನಿಮ್ಮ ಆಂತರಿಕ ಸಮಸ್ಯೆ ರೈತರ ಮೇಲೆ ಯಾಕೆ ಹಾಕುತ್ತಿರಿ ಈಗಾಗಲೆ ರೈತರು ಸಂಕಷ್ಟ ಕ್ಕೆ ಸಿಲುಕಿದ್ದಾರೆ .ಇತಂಹ ಸಮಯದಲ್ಲಿ ನೀವು ರೈತರಿಂದ ಟಮೋಟೊ ಕೊಂಡು ಅವರಿಗೆ ಹಣ ನೀಡದಿದ್ದರೆ ಹೇಗೆ ರೈತರಿಗರ ಎಲ್ಲಾ ಇನ್ನು ಒಂದು ವಾರದೊಳಗೆ ರೈತರ ಹಣ ಕೋಡಬೇಕು ಇಲ್ಲವಾದಲ್ಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
+ There are no comments
Add yours