ಚೇರ್ ಗೆ ಪರದಾಡಿದ ನಟಿ ಭಾವನ, ಕಾರ್ಯಕರ್ತರಿಂದ ಭಾವನಾಗೆ ತರಾಟೆ ಏಕೆ ಗೊತ್ತೆ?

 

 

 

 

ಬೆಂಗಳೂರು, (ಜುಲೈ.26): ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಇಡಿ ವಿಚಾರಣೆ ಖಂಡಿಸಿ ಬೆಂಗಳೂರಲ್ಲಿ ಡಿ.ಕೆ.ಶಿವಕುಮಾರ್​ ನೇತೃತ್ವದಲ್ಲಿ ಮಂಗಳವಾರ ಮೌನ ಪ್ರತಿಭಟನೆ ಮಾಡಿತು. ಈ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದ ನಟಿ ಭಾವನಾ ಕುಳಿತುಕೊಳ್ಳಲು ಚೇರ್‌ಗಾಗಿ ಪರದಾಡಿರುವ ಪ್ರಸಂಗ ನಡೆಯಿತು.

 

 

ಹೌದು .ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಇಂದು  ನಾಯಕರು ನಡೆಸುತ್ತಿದ್ದ ಮೌನ ಪ್ರತಿಭಟನೆಗೆ ಭಾವನಾ ಆಗಮಿಸಿದರು. ಈ ವೇಳೆ ಭಾವನಾ ಚೇರ್‌ಗಾಗಿ ಪರದಾಡಿದರು. ಕೊನೆಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮ್ಮದ್ ಮಧ್ಯೆ ಡಿಕೆಶಿಗೆ ಮೀಸಲಿಟ್ಟಿದ್ದ ಚೇರ್‌ನಲ್ಲಿ ಕುಳಿತುಕೊಳ್ಳಲು ಹೋದರು. ಬಳಿಕ ಕಾರ್ಯಕರ್ತರು ಓಯ್ ಎಂದು ಜೋರಾಗಿ ಕೂಗಿದ್ದಾರೆ. ನಂತರ ಹರಿಪ್ರಸಾದ್ ಅವರು ಇದು ಡಿಕೆಶಿ ಚೇರ್ ಎಂದು ಕಿವಿಯಲ್ಲಿ  ಹೇಳಿದ್ದು ತಕ್ಷಣ ಎಚ್ಚೆತ್ತುಕೊಂಡಿದ್ದಾರೆ.  ನಂತರ ಕಾರ್ಯಕರ್ತರು ನೀನು ಬಿಜೆಪಿಗೆ ಹೋಗಿದ್ದೆ ಎಂದಿದ್ದಾರೆ. ಈ ಸಂದರ್ಭದಲ್ಲಿ  ಭಾವನ ಮಾತನಾಡಿ ನಾನು ಬಿಜೆಪಿಗೆ ಹೋಗಿದ್ದು ನಿಜ ಆದರೆ ತತ್ವ ಸಿದ್ದಾಂತ ಒಪ್ಪಲಿಲ್ಲ ಸುರ್ಜೆವಾಲ‌ ಅವರ ಸಮ್ಮುಖದಲ್ಲಿ  ಕಾಂಗ್ರೆಸ್ ಸೇರಿದ್ದೇನೆ ಎಂದು‌ ಫೋಟೋ ತೋರಿಸಿ ಸಮಾಧಾನಪಡಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours