ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಪ್ರವಾಸ.

 

 

 

 

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ವಿವರ
******
ಚಿತ್ರದುರ್ಗ,ಮಾರ್ಚ್05:
ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಮಾರ್ಚ್ 6 ಮತ್ತು 7 ರಂದು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.  
 ಸಚಿವರು ಮಾರ್ಚ್ 06 ರಂದು ಮಧ್ಯಾಹ್ನ ಬಳ್ಳಾರಿಯಿಂದ ಹೊರಟು  ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರುಗೆ ಆಗಮಿಸಿ, ಮಧ್ಯಾಹ್ನ 3.30 ಕ್ಕೆ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್ ಕೆಳಗಳಹಟ್ಟಿಯಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4.30ಕ್ಕೆ  ಗದಗಕ್ಕೆ ತೆರಳುವರು.
 ಮಾರ್ಚ್ 7ರಂದು ಧಾರವಾಡದಿಂದ ಸಂಜೆ 6.30 ಚಿತ್ರದುರ್ಗಕ್ಕೆ  ಆಗಮಿಸಿ, ನಗರದ ಕಬೀರಾನಂದ ಆಶ್ರಮದ 91ನೇ ಶಿವರಾತ್ರಿ ಉತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ರಾತ್ರಿ 7.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours