ಚಳ್ಳಕೆರೆ:ವಿಪರೀತ ಹೊಟ್ಟೆ ನೋವು ತಾಳಲಾರದೆ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಮಧುರೆ ಉಪ್ಪಾರಹಟ್ಟಿ ಗ್ರಾಮದ ನವೀನ್ ಕುಮಾರ್(23) ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆರು ತಿಂಗಳಿಂದ ಹೊಟ್ಟೆ ನೋವು ಬಾಧೆ ಬಳಲುತ್ತಿದ್ದು ಇತ್ತೀಚೆಗೆ ತನ್ನ ಗ್ರಾಮಕ್ಕೆ ಬಂದಿದ್ದು ಎನ್ನಲಾಗಿದೆ.
ಸ್ಥಳಕ್ಕೆ ಪಿಎಸ್’ಐ ಮಂಜುನಾಥ್, ಅರ್ಜುನ್, ಲಿಂಗಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು, ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
+ There are no comments
Add yours