ಕ್ಷೇತ್ರದಾದ್ಯಂತ ಉತ್ತಮ ಮಳೆಯಿಂದ‌ ಕೆರೆ‌ ಕಟ್ಟೆಗಳು ತಂಬಿ ರೈತರ, ಜನರ ಬದುಕು ಹಸನಾಗುವ ಕಾಲ‌:ಶಾಸಕ ಟಿ.ರಘುಮೂರ್ತಿ

 

 

 

 

ಚಳ್ಳಕೆರೆ-05 ಕ್ಷೇತ್ರದಾದ್ಯಂತ ಉತ್ತಮ ಮಳೆಯಿಂದ‌ ಕೆರೆ‌ ಕಟ್ಟೆಗಳು ತಂಬಿ ರೈತರ, ಜನರ ಬದುಕು ಹಸನಾಗುವ ಕಾಲ‌ ಬಂದಿದೆ. ಜನರು ಉತ್ತಮ ಬದುಕು ರೂಪಿಸಿಕೊಳ್ಳಲು ಇದು ಸಕಾಲ ಎಂದು‌ ಶಾಸಕ ಟಿ.ರಘುಮೂರ್ತಿ ಹೇಳಿದರು.

 

 

 


ಅವರು ತಾಲ್ಲೂಕಿನ ಕೊರ್ಲಕುಂಟೆ‌ ಗ್ರಾಮದ ಕೆರೆ ಬಾಗಿನ‌ ಅರ್ಪಿಸಿ ಮಾತನಾಡಿದರು.‌ ತಾಲ್ಲೂಕಿನ ಸುಮಾರು ಕೆರೆಗಳು ತಂಬಿವೆ ಇದರಿಂದ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರಿನ ವ್ಯವಸ್ಥೆ ಉಂಟಾಗಿದೆ. ಕೃಷಿ‌ ಚಟುವಟಿಕೆಗಳು ಸಹ ಹೆಚ್ಚಿನದಾಗಿ‌‌ ನಡೆಯಲು ಪ್ರಾರಂಭವಾಗಿದೆ. ಮಳೆ ಇಲ್ಲದೆ ಭೂಮಿ ಮಾರಾಟ ಮಾಡುವ ಮುಂದಾಗಿದ್ದ ರೈತ ಈಗ ಭೂಮಿಯನ್ನು ಹದ ಮಾಡಿ ಬಿತ್ತನೆ ಮಾಡುತ್ತಿದ್ದಾನೆ. ಸಾವಿರಾರು ಎಕರೆ‌ ಪ್ರದೇಶದಲ್ಲಿ ಕೃಷಿ‌ ಚಟುವಟಿಕೆ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ರೈತರ ಬದುಕು‌ ನೆಮ್ಮದಿಯಾಗಲಿದೆ. ಇದೆ ರೀತಿಯಲ್ಲಿ ಪ್ರತಿವರ್ಷವೂ ಮಳೆ‌ ಬಂದು ಉತ್ತಮ ಬದುಕು ರೂಪಿತವಾಗಲಿ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಮದ‌ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours