ಮುರುಘಾ ಶರಣರು ಜಿಲ್ಲಾ ಆಸ್ಪತ್ರೆಯ ಐಸಿಯು ವಾರ್ಡಿಗೆ ಶಿಫ್ಟ್ ,ದಾವಣಗೆರೆಯಿಂದ ಹೃದಯ ರೋಗ ತಜ್ಙರ ಆಗಮನ

 

 

 

 

ಪೋಕ್ಸೋ ಪ್ರಕರಣ: ಬಂಧಿತ ಡಾ.ಮುರುಘಾ ಶರಣರು ಎದೆ ನೋವಿನಿಂದ ಆಸ್ಪತ್ರೆಗೆ ಶಿಫ್ಟ್

 

 

ಚಿತ್ರದುರ್ಗ, ಸೆ.01: ಪೋಕ್ಸೋಯಡಿ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರು ತೀವ್ರವಾದ ಎದೆಯ ನೋವಿನಿಂದ ಬಳಲುತ್ತಿರುವ ಅವರು ಜೈಲಿನಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಕಳೆದ ಶುಕ್ರವಾರ ಅಪ್ರಾಪ್ತ ಬಾಲಕಿಯರ ಮೇಲಿನ ಕಿರುಕುಳದಿಂದ ಪೋಕ್ಸೋಯಡಿ ಪ್ರಕರಣ ದಾಖಲಾಗಿದ್ದು, ಕಳೆದ ರಾತ್ರಿ ಪೊಲೀಸ್ ಬಂಧಿಯಾಗಿರುವ ಜೈಲು ಸೇರಿದ ಡಾ.ಮುರುಘಾ ಶರಣರಿಗೆ ಇಂದು ತೀವ್ರ ಎದೆನೋವು ಕಾಣಿಸಿಕೊಂಡಿದೆ. ಆಗ ಜೈಲಿನ ಅಧಿಕಾರಿಗಳು ಹಾಗೂ ಆಸ್ಪತ್ರೆಗೆ ಕೂಡಲೇ ಸ್ವಾಮೀಜಿಯವರನ್ನು ಜಿಲ್ಲಾ ಐಸಿಯು ವಾರ್ಡಿಗೆ ಚಿಕಿತ್ಸೆ ಕೊಡಿಸಿದರು. ಸತತ 2 ಗಂಟೆಗಳಿಂದ ವೈದ್ಯಕೀಯ ತಪಾಸಣೆ ನಡೆಸಿದ್ದು, ಶೂಗರ್, ಬಿಪಿ ಪರೀಕ್ಷೆ ಜೊತೆಗೆ ಇಸಿಜಿ, ಸಿಟಿ ಸ್ಕ್ಯಾನ್ ಕೂಡ ವೈದ್ಯರು ಮಾಡಿದ್ದಾರೆ.
ಡಾ.ಮುರುಘಾ ಶರಣರಿಗೆ ಜ್ವಾರ ರಕ್ತ ಕಾಣಿಸಿಕೊಂಡ ಖಾಸಗಿ ಲ್ಯಾಬ್ ಗೆ ಮಾದರಿ ರವಾನೆ ಮಾಡಿದ್ದು, ಲ್ಯಾಬ್ ನ ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.
ರಾತ್ರಿ ಆಕ್ಸಿಜನ್ ಸ್ಯಾಚುರೇಷನ್ 98 ಇದ್ದಿದ್ದು, ಈ ದಿನ ಬೆಳಗ್ಗೆ ಆಕ್ಸಿಜನ್ ಸ್ಯಾಚುರೇಷನ್ 94ಕ್ಕೆ ಇಳಿದಿದೆ. ಅಧಿಕ ಒತ್ತಡ ಹಾಗೂ ಚಿಂತೆಯಿಂದ ಆಕ್ಸಿಜನ್ ಸ್ಯಾಚುರೇಶನ್ ಲೆವೆಲ್ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದು, ದಾವಣಗೆರೆ ಜಿಲ್ಲೆಯಿಂದ ಹೃದಯಾಘಾತದಿಂದ ಕರೆಸಿಕೊಂಡಿದ್ದು ಶರಣರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ‌. ಜೊತೆಗೆ ಖಾಸಗಿ ಲ್ಯಾಬ್ ವರದಿ ಬಂದ ಬಳಿಕ ವೈದ್ಯರ ಚಿಕಿತ್ಸೆಗೆ ಅಂತಿಮ ಸೂಚನೆ ಐಸಿಯಲ್ಲಿ ನೀಡಿ ಬಳಿಕ ಜಯದೇವ ಆಸ್ಪತ್ರೆಗೆ ದಾಖಲಿಸಲು ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದ್ದಾರೆ.

[t4b-ticker]

You May Also Like

More From Author

+ There are no comments

Add yours