ಚಿತ್ರದುರ್ಗ: ಹುಣಸೇಕಟ್ಟೆ ಗೊಲ್ಲರಹಟ್ಟಿ ಸೇರಿ ಅನೇಕ ಹಳ್ಳಿಗಳಿಂದ ಚಿತ್ರದುರ್ಗ ನಗರಕ್ಕೆ ನೂತನ ಕೆಎಸ್ಆರ್ಟಿಸಿ ಬಸ್ ಸೇವೆಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.
ತಾಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ಮಾತನಾಡಿ ಹುಣಸೇಕಟ್ಟೆ ಗೊಲ್ಲರಹಟ್ಟಿ, ವಡ್ಡರ ಸಿದ್ದವ್ವನಹಳ್ಳಿ, ಕೊಡಗವಳ್ಳಿ, ಕ್ಯಾಸಾಪುರ, ಸೀಬಾರ ಗ್ರಾಮಗಳಲ್ಲಿ ಬಸ್ ಸಂಚಾರ ಆರಂಭದಿಂದ ರೈತರಿಗೆ, ವಿದ್ಯಾರ್ಥಿಗಳಿಗೆ, ವ್ಯಾಪರಸ್ಥರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಸಾರ್ವಜನಿಕರು ಬಸ್ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಮನೆಗಳಲ್ಲಿ ಬೈಕ್ ಗಳು ಇದ್ದರು ಸಹ ಮಳೆಗಾಲದಲ್ಲಿ ಬಸ್ ಪ್ರಯಾಣ ಹೆಚ್ಚು ಸುರಕ್ಷಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಖಂಡರಾದ ಮಲ್ಲಿಕಾರ್ಜುನ, ಬಾಬು,ರಘು, ಶ್ರೀನಿವಾಸ್ , ಆನಂದ್, ನಿಂಗಪ್ಪ , ಗುರುಲಿಂಗಪ್ಪ ಮತ್ತು ಮಕ್ಕಳು ಮತ್ತು ಗ್ರಾಮಸ್ಥರು ಹಾಜರಿದ್ದರು..
[t4b-ticker]
+ There are no comments
Add yours