ಚಿತ್ರದುರ್ಗ: ಮಠದ ಕುರುಬರಹಟ್ಟಿಯಲ್ಲಿ ಎಪ್ಪತ್ತು ವರ್ಷದ ವೃದ್ದೆ ಶಿವಮ್ಮನನ್ನು ಮನೆಯಿಂದ ಹೊರಹಾಕಿರುವ ವಿಷಯ ತಿಳಿದು ಒನಕೆ ಓಬವ್ವ ಮಹಿಳಾ ಬಳಗ ಹಾಗೂ ಭಾರತೀಯ ಮಹಿಳಾ ರಕ್ಷಣಾ ವೇದಿಕೆಯಿಂದ ವೃದ್ದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವೃದ್ದೆಗೆ ಇಬ್ಬರು ಪುತ್ರರಿದ್ದು, ಕೆಲವು ದಿನಗಳ ಕಾಲ ತಾಯಿಯ ಆರೈಕೆ ಮಾಡಿ ನಂತರ ಮನೆಯಿಂದ ಹೊರ ತಳ್ಳಿ ನಿರ್ಲಕ್ಷಿಸಿರುವ ವಿಚಾರ ತಿಳಿದ ಒನಕೆ ಓಬವ್ವ ಮಹಿಳಾ ಬಳಗ ಹಾಗೂ ಭಾರತೀಯ ಮಹಿಳಾ ರಕ್ಷಣಾ ವೇದಿಕೆಯವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಹಕಾರದೊಂದಿಗೆ ವೃದ್ದೆಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಸದ್ಯಕ್ಕೆ ವೃದ್ದೆ ಶಿವಮ್ಮ ಚೇತರಿಸಿಕೊಳ್ಳುತ್ತಿದ್ದಾರೆ
ಒನಕೆ ಓಬವ್ವ ಮಹಿಳಾ ಬಳಗದ ಅಧ್ಯಕ್ಷೆ ಎಸ್ತರ್ ಸುನಂದ, ಭಾರತೀಯ ಮಹಿಳಾ ರಕ್ಷಣಾ ವೇದಿಕೆ ಅಧ್ಯಕ್ಷ ಭಾರತಿ, ಕಮಲಮ್ಮ, ವಿನೋಧ, ಗೌರಮ್ಮ, ಹೊನ್ನಮ್ಮ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಶಾಂತಲಾ ಮತ್ತು ಸಿಬ್ಬಂದಿ ವರ್ಗದವರು ವೃದ್ದೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸುವಲ್ಲಿ ಶ್ರಮಿಸಿದರು.
[t4b-ticker]
+ There are no comments
Add yours