ಪ್ರತಿ ಮಂಗಳವಾರ ತಾಲ್ಲೂಕು ಕಚೇರಿಗೆ ಡಿಸಿ ಭೇಟಿ: ಸಾರ್ವಜನಿಕರ ಕುಂದು ಕೊರತೆ ಆಲಿಕೆ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಸೆಪ್ಟೆಂಬರ್ 06:
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪ್ರತಿ ಮಂಗಳವಾರ ಜಿಲ್ಲಾ ವ್ಯಾಪ್ತಿಯ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಲಭ್ಯವಿದ್ದು, ಜನ ಸಾಮಾನ್ಯರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ.
ಸೆಪ್ಟೆಂಬರ್ 6 ಮಂಗಳವಾರ ಮತ್ತು ನವೆಂಬರ್ 8 ಮಂಗಳವಾರದಂದು ಹೊಳಲ್ಕೆರೆ ತಾಲ್ಲೂಕು ಕಚೇರಿ, ಸೆಪ್ಟೆಂಬರ್ 13 ಮಂಗಳವಾರ ಮತ್ತು ನವೆಂಬರ್ 15 ಮಂಗಳವಾರದಂದು ಹಿರಿಯೂರು ತಾಲ್ಲೂಕು ಕಚೇರಿ, ಸೆಪ್ಟೆಂಬರ್ 20 ಮಂಗಳವಾರ ಹಾಗೂ ನವೆಂಬರ್ 22 ಮಂಗಳವಾರ ಚಳ್ಳಕೆರೆ ತಾಲ್ಲೂಕು ಕಚೇರಿ, ಸೆಪ್ಟೆಂಬರ್ 27 ಮಂಗಳವಾರ ಹಾಗೂ ನವೆಂಬರ್ 29 ಮಂಗಳವಾರದಂದು ಹೊಸದುರ್ಗ ತಾಲ್ಲೂಕು ಕಚೇರಿ, ಅಕ್ಟೋಬರ್ 11 ಮಂಗಳವಾರ ಹಾಗೂ ಡಿಸೆಂಬರ್ 6 ಮಂಗಳವಾರದಂದು ಮೊಳಕಾಲ್ಮುರು ತಾಲ್ಲೂಕು ಕಚೇರಿಗೆ ಭೇಟಿ, ಅಕ್ಟೋಬರ್ 18 ಮಂಗಳವಾರ ಹಾಗೂ ಡಿಸೆಂಬರ್ 13 ಮಂಗಳವಾರದಂದು ಚಿತ್ರದುರ್ಗ ತಾಲ್ಲೂಕು ಕಚೇರಿಗೆ ಭೇಟಿ ನೀಡಲಿದ್ದಾರೆ.
ಸಾರ್ವಜನಿಕರು ತೊಂದರೆ, ಸಮಸ್ಯೆಗಳಿಗೆ ಭೇಟಿ ಮಾಡಿ, ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours