ಚಳ್ಳಕೆರೆ-16 : ನಗರದ ಗಾಂಧಿನಗರ ಪಾರ್ಕ್ ಬಳಿ ಸರ್ವಧರ್ಮ ಗಣೇಶ ಬಳಗದಿಂದ ಏರ್ಪಡಿದ್ದ ಗಣೇಶ ಮೂರ್ತಿ ಶುಕ್ರವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು.
ಗಾಂಧಿನಗರದಿಂದ ಹೊರಟ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಚಾಲನೆ ಸಿಗುತ್ತಲ್ಲೇ ಯುವಕರು, ಮಕ್ಕಳು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಸಂಗೊಳ್ಳಿ ರಾಯಣ್ಣ ರಸ್ತೆ, ಚಿತ್ರದುರ್ಗ ರಸ್ತೆ, ಬೆಂಗಳೂರು ರಸ್ತೆ ಮೂಲಕ ರೈಲ್ವೆ ಬಿಡ್ಜ್ ಬಳಿ ಇರುವ ಕೆರೆಯಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆ ನಡೆದ ರಸ್ತೆಯುದ್ದಕ್ಕೂ ಜನರು ಕಿಕ್ಕೀರಿದು ಸೇರಿದ್ದರು. ಮೆರವಣಿಗೆಯುದ್ದಕ್ಕೂ ಭಕ್ತರು ಗಣೇಶ ಮೂರ್ತಿಗೆ ನಮಿಸಿದರು.
[t4b-ticker]
+ There are no comments
Add yours