ಚಳ್ಳಕೆರೆ-27 ಬೆಂಗಳೂರು ನಿರ್ಮಾಣದ ಕರ್ತೃ ನಾಡಪ್ರಭ ಕೆಂಪೇಗೌಡರ ಸಾಮಾಜಿಕ ಕಳಕಳಿ ಎಂದಿಗೂ ಪ್ರಸ್ತುತ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ಬೆಂಗಳೂರು ಕಟ್ಟಿದರು. ಬೆಂಗಳೂರಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅದರ ಫಲವಾಗಿ ಇಂದು ಬೆಂಗಳೂರು ಮಹಾನಗರವಾಗಿ ಬೆಳೆದು ವಿಶ್ವವಿಖ್ಯಾತದಲ್ಲಿ ಗುರುತಿಸಿಕೊಂಡಿದೆ ಎಂದು ಕೆಂಪೇಗೌಡರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಉಪ ತಹಶೀಲ್ದಾರ್ ಸಂಧ್ಯಾ , ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ನಗರಸಭೆ ಸದಸ್ಯರಾದ ಸುಮಾ, ಸುಜಾತ ಪ್ರಹ್ಲಾದ್, ಜೈ ತುಂಬಿ, ಕವಿತಾ ಬೋರಯ್ಯ, ಎಂ ಸಾವಿತ್ರಿ, ಆರ್ ರುದ್ರನಾಯಕ ರಮೇಶ್ ಗೌಡ, ಎಂಜಿ ರಾಘವೇಂದ್ರ, ಮಲ್ಲಿಕಾರ್ಜುನ, ವಿರುಪಾಕ್ಷಿ, ಕೆ ವೀರಭದ್ರಯ್ಯ, ಮುಖಂಡರಾದ ಚೆನ್ನಕೇಶವ ರೆಡ್ಡಿಹಳ್ಳಿ ಶಿವಣ್ಣ, ಪ್ರಭುದೇವ್ ಮುಂತಾದವರು ಪಾಲ್ಗೊಂಡಿದ್ದರು.
[t4b-ticker]
+ There are no comments
Add yours