ಬಿಜೆಪಿ ಪಕ್ಷ 40% ಭ್ರಷ್ಟಾಚಾರದಲ್ಲಿ ತೊಡಗಿದೆ: ಡಿಕೆಶಿ

 

 

 

 

ಚಿತ್ರದುರ್ಗ ನ. ೨೮ :ಬಿಜೆಪಿ ಭ್ರಷ್ಟಾಚಾರ, ಮತ ಕಳವು, ದಿವಾಳಿ ಆಡಳಿತ ಮುಚ್ಚಿಟ್ಟುಕೊಳ್ಳಲು ಸಿಟಿ ರವಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗ ತಾಲೂಕಿನ ಕ್ಯಾದಿಗೆರೆ ಗ್ರಾಮದ ಬಳಿಯ ಹೆಲಿಪ್ಯಾಡ್‌ನಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದುಗಳ ಸರಣಿ ಹತ್ಯೆ ಆಗತ್ತೆ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಸಿಟಿ ರವಿ ವಿರುದ್ಧ ಡಿಸಿಪಿ ಹಾಗೂ ಸಿಎಂಗೆ ಕಾಂಗ್ರೆಸ್ ದೂರು ನೀಡಲಿದೆ ಚುನಾವಣೆ ಸಮಯದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆಂದು ದೂರು ನೀಡುತ್ತೇವೆ ಎಂದರು.

ಸಿದ್ದು-ಡಿಕೆಶಿಗೆ ಕುರ್ಚಿ ಚಿಂತೆ ಎಂಬ ಶ್ರೀರಾಮುಲು ಹೇಳಿಕೆಗೆ ಪ್ರಕ್ರಿಯೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಅದನ್ನು ನೋಡಿಕೊಳ್ಳಲಿ ಬಳ್ಳಾರಿ ಅವರ ಇಂಟ್ರನಲ್ ಸರಿ ಮಾಡಿಕೊಳ್ಳಲಿ ನಮಗೆ ರಾಜ್ಯದ ಜನತೆ ಖುಷಿ ಪಡಿಸಬೇಕು, ಆ ನಿಟ್ಟಿನಲ್ಲಿ ಅಧಿಕಾರಕ್ಕೆ ಬರಬೇಕು ಜನರಿಗೆ ಉತ್ತಮ ಆಡಳಿತ ನೀಡಲು ನಾವು ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದ ಡಿಕೆಶಿ ಚಾಮರಾಜಪೇಟೆಯಲ್ಲಿ ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ನಾಯಕರು ಅದು ಬಿಜೆಪಿ ಸಂಸ್ಕ್ರತಿ ತೋರಿಸುತ್ತದೆ ಎಂದರು.

 

 

ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ ಯವರು ನಿಮ್ಮ ಜಿಲ್ಲೆಯಲ್ಲಿ ೫ ದಿನ ಭಾರತ್ ಜೋಡೋ ಯಾತ್ರೆ ಯಲ್ಲಿ ನಡೆದರು ನೀವೆಲ್ಲ ಸೇರಿ ಹೆಜ್ಜೆ ಹಾಕಿ ಈಡೀ ರಾಷ್ಟ್ರದ ಗಮನ ಸೆಳೆದಿದ್ದಿರಿ. ರಾಹುಲ್ ಗಾಂಧಿಗೆ ಮಾತ್ರ ಶಕ್ತಿ ನೀಡಲಿಲ್ಲ.. ಈಡಿ ದೇಶಕ್ಕೆ ಶಕ್ತಿ ತುಂಬಿದ್ದೀರಿ. ಕಾಂಗ್ರೆಸ್ ಪಕ್ಷದ ಇತಿಹಾಸ ಈ ದೇಶದ ಇತಿಹಾಸ.. ಕಾಂಗ್ರೆಸ್ ಪಕ್ಷ ದೇಶಕ್ಕೆ ತನ್ನದೇಯಾದ ಕೊಡುಗೆಯನ್ನು ನೀಡಿದೆ ಎಂದರು.

ಇಂದಿರಾ ಗಾಂಧಿಯವರು ಉಳುವವರಿಗೆ ಭೂಮಿ ಕೊಡಬೇಕು.. ಹಸಿದವರಿಗೆ ಅನ್ನ ನೀಡಬೇಕು.. ಎಂಬ ಆಶಯವನ್ನು ಇಟ್ಟುಕೊಂಡವರು. ಈಗ ಮೊಬೈಲ್ ಟಿ.ವಿ.. ನರೇಗಾ ಇವೆಲ್ಲ ರಾಜೀವ್ ಗಾಂಧಿಯವರ ಕೊಡುಗೆ.. ಸೋನಿಯಾ ಗಾಂಧಿ ಪ್ರಧಾನಿಯಾಗುವ ಎಲ್ಲಾ ಅವಕಾಶಗಳಿದ್ದವು.. ಇದರಿಂದಾಗಿ ನಾನು ಅತ್ತೆಯನ್ನು, ಗಂಡನನ್ನು ಕಳೆದುಕೊಂಡಿದ್ದೇನೆ ನನಗೆ ಆ ಹುದ್ದೆ ಬೇಡವೆಂದು ತಿರಸ್ಕರಿಸಿದರು. ನಾವೆಲ್ಲ ಒಂದೇ ಎಂದರೆ ಬಿಜೆಪಿಯವರು ಹಿಂದೂಗಳೆಲ್ಲ ಒಂದೇ ಅಂತರೆ… ಅಂಬೇಡ್ಕರ್ ರವರ ಪುತ್ಥಳಿಯನ್ನು ದೇವರೋಪಾದಿಯಲ್ಲಿ ಗೌರವಿಸುತ್ತಿದ್ದೇವೆ ಎಂದರು.

ಬಿಜೆಪಿ ಪಕ್ಷ ೪೦% ಭ್ರಷ್ಟಾಚಾರದಲ್ಲಿ ತೊಡಗಿದೆ.. ಬೆಲೆ ಏರಿಕೆ ನಿಯಂತ್ರಣ ಮಾಡಲಿಕ್ಕೆ ಆಗುತ್ತಿಲ್ಲ..ಎಲ್ಲರೂ ಒಗ್ಗಟ್ಟಾಗಿ ಬೂತ್ ಮಟ್ಟಕ್ಕೆ ಹೋಗಿ ಪಕ್ಷ ಸಂಘಟನೆ ಮಾಡಬೇಕು.. ಮತ ಕಳ್ಳತನಕ್ಕೆ ನಿಂತಿದ್ದಾರೆ.. ನಿಮ್ಮ ಮತಗಳು ಕಳ್ಳತನ ಆಗುತ್ತಿವೆ ನಿಮ್ಮ ಮತವನ್ನು ಪರೀಕ್ಷಿಸಿಕೊಳ್ಳಿ ಎಂದು ಶಿವಕುಮಾರ್ ಕರೆ ನೀಡಿದರು.

[t4b-ticker]

You May Also Like

More From Author

+ There are no comments

Add yours