ಮದ್ಯ ಮಾರಾಟ ಹಾಗೂ ಸೇವನೆ ಗ್ರಾಮಗಳ ನೆಮ್ಮದಿಗೆ ಭಂಗ ಹಾಗೂ ಆರೋಗ್ಯಕ್ಕೆ ಹಾನಿಕರ ಎಂದು ತಹಶೀಲ್ದಾರ್ ಎನ್.ರಘಮೂರ್ತಿ ಹೇಳಿದರು.
ತಾಲ್ಲೂಕಿನ ಭೀಮನಕೆರೆ ಗ್ರಾಮದ ಕಾಲೋನಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಈ ದಿನ ಕಾಲೋನಿಗೆ ಭೇಟಿ ನೀಡಿ ಅಂಗಡಿಗಳಿಗಳನ್ನು ಪರಿಶೀಲನೆ ನಡೆಸಿದರು .ನಂತರ ಅಂಗಡಿ ಮಾಲೀಕರು ಹಾಗೂ ಗ್ರಾಮಸ್ಥರನ್ನು ಕುರಿತು ಮಾತನಾಡಿ ಮಧ್ಯೆ ಮಾರಾಟ ಹಾಗೂ ಸೇವನೆ ಆರೋಗ್ಯಕ್ಕೆ ಹಾನಿಕರ ಹಾಗೂ ಗ್ರಾಮಗಳ ನೆಮ್ಮದಿಗೆ ಭಂಗವಾಗುತ್ತದೆ. ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.ಅದರಲ್ಲೂ ಶಾಲೆ ದೇವಸ್ಥಾನದ ಸಮೀಪ ಮಾರಾಟ ಮಾಡಿತ್ತಾರೆ ಎಂದು ಕೇಳಿಬಂದಿದೆ.ಯಾರೆ ಹಾಗಲಿ ಅಕ್ರಮ ಮಧ್ಯಮಾರಾಟ ಮಾಡಬೇಡಿ,ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಉಪ ತಾಹಶೀಲ್ದಾರ್ ಚೇತನ್ ಕುಮಾರ್,ಗ್ರಾಮಲೆಕ್ಕಿಗರಾದ ಶರಣುಬಸಪ್ಪ,ಉಮೇಶ ಇದ್ದರು.
[t4b-ticker]
+ There are no comments
Add yours