ಚಿತ್ರದುರ್ಗ, ಜೂಲೈ ೬.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಜಾಜೂರು ಗ್ರಾಮದ ಸತ್ಯನಾರಾಯಣ ರಾವ್ ಮತ್ತು ಸುಮಿತ್ರಮ್ಮ ದಂಪತಿಗಳ ಮಗಳು ಎಸ್ ಅಕ್ಷತ ರವರಿಗೆ ರಸಾಯನ ಶಾಸ್ತ್ರ ವಿಷಯದಲ್ಲಿ ತುಮಕೂರು ವಿಶ್ವವಿದ್ಯಾಲಯವು ಪಿಹೆಚ್ ಡಿ ಪದವಿಯನ್ನು ನೀಡಿದೆ. ಮಂಗಳವಾರ ತುಮಕೂರಿನಲ್ಲಿ ನಡೆದ ವಿ ವಿಯ ೧೫ ನೇ ಘಟಿಕಕೋತ್ಸವದಲ್ಲಿ ರಾಜ್ಯಪಾಲರಾದ ಥವರ್ ಚಂದ್ ಗೆಲ್ಹೋಟ್ ರವರು ಪಿಹೆಚ್ ಡಿ ಪದವಿಯ ಪ್ರಮಾಣಪತ್ರ ವನ್ನು ನೀಡಿದರು. ತುಮಕೂರು ವಿ ವಿ ಯ ರಸಾಯನ ಶಾಸ್ತ್ರ ವಿಭಾಗದ ಮಾಜಿ ಅಧ್ಯಕ್ಷರು ಹಾಗು ಹಾಲಿ ನ್ಯಾಕ್ ಉಪಾಧ್ಯಕ್ಷರು ಆದ ಡಾ. ಶ್ರೀನಿವಾಸ ರವರ ಮಾರ್ಗದರ್ಶನದಲ್ಲಿ ವಿ ವಿ ಗೆ ಮಂಡಿಸಿದ ..… ಸಿಂಥಸಿಸ್ ಆಫ್ ಪ್ಯೂರ್ ಅಂಡ್ ಡೋಪ್ಡ್ ಮೆಟಲ್ ಆಕ್ಸೆöಡ್ ನಾನೋಮೆಟೀರಿಯಲ್ಸ್ ಅಂಡ್ ದೇರ್ ಲ್ಯೂಮಿನೇಷನ್ಸ್ ಅಂಡ್ ಫೋಟೊಕ್ಯಾಥಲಿಕ್ ಸ್ಟಡೀಸ್ .. ಅನ್ನುವ ಮಹಾ ಪ್ರಭಂಧಕ್ಕೆ ಪಿಹೆಚ್ ಡಿ ಪದವಿಯನ್ನು ನೀಡಲಾಗಿದೆ.
[t4b-ticker]
+ There are no comments
Add yours