ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಫ್ಲೈಓವರ್ ಮೇಲಿಂದ ಲಾರಿಯಲ್ಲಿದ್ದ ಮರದ ದಿಮ್ಮಿ ಬೈಕ್ ಮೇಲೆ ಬಿದ್ದು ಒಬ್ಬನ ಸಾವು, ಮತ್ತೊಬ್ಬನ ಗಾಯಗಳಾಗಿದೆ.
ನಾಗರಬಾವಿ ರಿಂಗ್ ರಸ್ತೆಯ ಫ್ಲೈಓವರ್ ಹತ್ತಿತ ಘಟನೆ ನಡೆದಿದ್ದು ಸುಂಕದಕಟ್ಟೆಯಿಂದ ನಾಗರಬಾವಿ ಕಡೆಗೆ ಬರುತ್ತಿದ್ದ ಆಂಧ್ರ ಲಾರಿ ಡ್ರೈವರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಲಾರಿ ಪಲ್ಟಿ ಆಗುತ್ತಿದ್ದಂತೆ ಫ್ಲೈಓವರ್ನಿಂದ ಲಾರಿಯಿಂದ ಬಿದ್ದ ಮರದ ದಿಮ್ಮಿಗಳು, ಫ್ಲೈಓವರ್ ಕೆಳರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಮೇಲೆ ಬಿದ್ದಿದೆ. ಬೆಳ್ಳಂ ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದ ತಮಿಳುನಾಡು ಮೂಲದ ಸುಖೇಶ್ ಮೃತ ಪಟ್ಟಿದ್ದಾನೆ. ಸದ್ಯ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಟ್ರಾಫಿಕ್ ಠಾಣೆ ಪೊಲೀಸರ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
[t4b-ticker]
+ There are no comments
Add yours