ಚಿತ್ರದುರ್ಗ:ತಾಲೂಕಿನ ಡಿ.ಎಸ್ .ಹಳ್ಳಿ ರಸ್ತೆಯಲ್ಲಿ ನ ರಿಲಯನ್ಸ್ ಪೆಟ್ರೋಲ್ ಬಂಕ್ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಒಡೆದಿದ್ದು ಭೀಕರ ಅಪಘಾತ ಸಂಭವಿಸಿದೆ.ಬೈಕ್ ಒಡೆದ ರಭಸಕ್ಕೆ ಓರ್ವ ಬೈಕ್ ಸಾವರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಬೈಕ್ ಸವಾರನಿಗೆ ತೀವ್ರ ಗಾಯದಿಂದ ನರಳುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ಇಂಗಳದಾಳ್ ಗ್ರಾಮದ ನಾಗರಾಜ್(49) ಮೃತ ದುರ್ದೈವಿಯಾಗಿದ್ದಾನೆ ದೊಡ್ಡ ಸಿದ್ದವ್ವನಹಳ್ಳಿ ಕಡೆಯಿಂದ ಇಂಗಳದಾಳ್ ಗ್ರಾಮಕ್ಕೆ ವಾಪಸ್ ತೆರಳುವ ವೇಳೆಯಲಿ ಬಸ್ ಓವರ್ ಟೇಕ್ ಮಾಡಿ ವೇಗದಿಂದ ಬಂದ ಎದುರುಗಡೆ ಬೈಕ್ ಸವಾರ ನೇರವಾಗಿ ಎದುರು ಬಂದ ನಾಗರಾಜ್ ಬೈಕ್ ಗೆ ಒಡೆದಿದ್ದು ನಾಗರಾಜ್ ಸ್ಥಳದಲ್ಲಿಯೇ ತೀವ್ರ ಗಾಯದಿಂದ ನರಳಾಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು ತೀವ್ರ ರಸ್ತಸ್ರಾವ ಆಗಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದಿದೆ.
ಇದನ್ನೂ ಓದಿ: ಚಿತ್ರದುರ್ಗ| ಯುವ ಪರಿವರ್ತಕರು, ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ
ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಭೇಟಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[t4b-ticker]
+ There are no comments
Add yours