ಚಿತ್ರದುರ್ಗ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟಯ್ಯ ಎಸಿಬಿ ಬಲೆಗೆ

 

 

 

 

ಚಿತ್ರದುರ್ಗ:chitrdaurga:ಜು:4    ಚಿತ್ರದುರ್ಗದ  ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ ಲಂಚದ   ಹಣ ಪಡೆಯುವ ಸಮಯದಲ್ಲಿ  ಎಸಿಬಿ ಬಲೆಗೆ ಬಿದಿದ್ದಾರೆ.  ಕೃಷಿ ಹೊಂಡ ಕಾಮಗಾರಿ‌ ಚೆಕ್ ನೀಡಲು 1.40 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದರು. 2.80 ಲಕ್ಷ ಚೆಕ್ ನೀಡಲು 50% ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ  ತೋಟಗಾರಿಕೆ ಅಧಿಕಾರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು  ದಾಳಿ ನಡೆಸಿದ್ದಾರೆ.

 

 

ನಗರದ  ತೋಟಗಾರಿಕೆಯ  ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಸ್ಥಳದಲೇ ದಾಖಲೆ ಸಮೇತ   ಸಿಕ್ಕಿ ಬಿದ್ದ ಭ್ರಷ್ಟ ಅಧಿಕಾರಿ ತೋಟಯ್ಯ ಅವರನ್ನು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅರಬಗಟ್ಟ ಗ್ರಾಮದ ಕೃಷ್ಣ ನಾಯ್ಕ್ ಎಂಬುವವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೃಷ್ಣಾನಾಯ್ಕ್ ಎಂಬುವವರಿಂದ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ  ಚಿತ್ರದುರ್ಗ ಎಸಿಬಿ ಡಿವೈಎಸ್ಪಿ  ಉಮೇಶ್ ಈಶ್ವರ್ ನಾಯ್ಕ್, ಸಿಪಿಐ  ಪ್ರಭು ಬಿ.ಸೂರಿನ್, ಉಮೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

[t4b-ticker]

You May Also Like

More From Author

+ There are no comments

Add yours