ತಂತಿ ಬೇಲಿಯಲ್ಲಿ ವಿದ್ಯುತ್ ಹರಿದು ಬಾಲಕ ಸಾವು
ಹೊಸದುರ್ಗ : ಜಮೀನಿನ ಭದ್ರತೆಗಾಗಿ ಹಾಕಲಾಗಿದ್ದ ತಂತಿ ಬೇಲಿಯಲ್ಲಿ ವಿದ್ಯುತ್ ಹರಿಯುತ್ತಿದ್ದು, ಬಾಲಕನೋರ್ವ ಅರಿವಿಲ್ಲದೆ ವಿದ್ಯುತ್ ತಂತಿಯನ್ನು ಮುಟ್ಟಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕಬ್ಬಳ ಗ್ರಾಮದ ಹೊರವಲಯದಲ್ಲಿ ಭಾನುವಾರ ನಡೆದಿದೆ.
ಮೃತ ಬಾಲಕನನ್ನು ಕಬ್ಬಳ ಗ್ರಾಮದ 9 ನೇ ತರಗತಿ ಓದುತ್ತಿದ್ದ ಗಿರೀಶ (16) ಎಂದು ಗುರುತಿಸಲಾಗಿದೆ. ಈತನು ಎನ್.ಜಿ. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಶಾಲೆಗೆ ರಜೆ ಇದ್ದ ಕಾರಣ ತನ್ನ ತಂದೆ ಕುರಿ ಮೇಯಿಸಲು ಜಮೀನಿಗೆ ಹೋಗಿರಬಹುದು ಎಂದು ಊಹಿಸಿ, ತಂದೆ ಹುಡುಕುತ್ತಾ ಗಿರೀಶ್ ಎಂಬುವವರ ಜಮೀನಿಗೆ ಬರುತ್ತಿದ್ದ. ಅದೇ ವೇಳೆಯಲ್ಲಿ ಅವನ ಜೊತೆಯಲ್ಲಿದ್ದ ನಾಯಿ ಕಂಬದ ತಂತಿಯ ನಡುವೆ ನುಸಿಯಲು ಹೋಗಿದ್ದು, ಆಗ ನಾಯಿ ಚೀರಾಡಿದೆ. ಕೂಡಲೇ ಗಿರೀಶ್ ನಾಯಿ ಕಂಬಕ್ಕೆ ತಗುಲಿರುವ ತಂತಿಯಲ್ಲಿ ಸಿಲುಕಿರಬಹುದೆಂದು ಊಹಿಸಿ, ನಾಯಿಯನ್ನು ಮುಟ್ಟಿ ಎಳೆಯಲು ಹೋದಾಗ ಅವನಿಗೂ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾನೆ.
ಜಮೀನಿನ ಮಾಲೀಕ ಗಿರೀಶ್ ಎಂಬುವವರು ಜಮೀನಿಗೆ ನೀರು ಹರಿಸುವ ಸಲುವಾಗಿ ತನ್ನ ಜಮೀನಿನಲ್ಲಿದ್ದ ಪಂಪ್ ಸೆಟ್ ಮೋಟಾರ್ ಆನ್ ಮಾಡಿ ಬಿಟ್ಟಿದ್ದಾರೆ. ಮೋಟಾರ್ ಗೆ ಹೊಂದಿಕೊಂಡಿದ್ದ ವೈರ್ ತಂತಿ ಕಂಬದ ಕೆಳಗೆ ಹಾದು ಹೋಗಿತ್ತು. ಅದು ನಾಯಿ ನುಗಿದ ಜಾಗದಲ್ಲೇ ಡ್ಯಾಮೇಜ್ ಆಗಿ ಈ ಘಟನೆ ನಡೆದಿದೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[t4b-ticker]
+ There are no comments
Add yours