ಚಳ್ಳಕೆರೆ-14 ತಾಲ್ಲೂಕಿನ ಬೊಮ್ಮಸಮುದ್ರ ಗ್ರಾಮದ ರೈತ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ 4 ಕುರಿ, 1ಟಗರಿನ ಮೇಲೆ ನಾಯಿದಾಳಿ ನಡೆಸಿ ಸಾವನಪ್ಪಿರುತ್ತವೆ.
ಗ್ರಾಮದ ಕರಿಯಣ್ಣ ಎಂಬುವವರ ಜಮೀನ ರೊಪ್ಪದಲ್ಲಿ ಭಾನುವಾರ ರಾತ್ರಿ ಗೂಡಿಹಾಕಿ ರೈತ ತಿಪ್ಪೇಸ್ವಾಮಿ ಊಟ ಮಾಡಲು ಗ್ರಾಮಕ್ಕೆ ಬಂದ ಸಂರ್ಭದಲ್ಲಿ ನಾಯಿ ದಾಳಿ ನಡೆಸಿ ಐದು ಕುರಿಗಳ ಮೇಲೆದಾಳಿನಡೆಸಿ ಸಾಯಿಸಿದೆ. ಈ ಬಗ್ಗೆ ಮಾತನಾಡಿದ ರೈತ ತಿಪ್ಪೇಸ್ವಾಮಿ, ಬೀದಿನಾಯಿಗಳ ಉಪಟಳದ ಗ್ರಾಮದಲ್ಲಿ ಹೆಚ್ಚಿದೆ. ನಾಯಿ ದಾಳಿಯಿಂದ ನನ್ನ ಐದು ಕುರಿಗಳು ಸಾವನಪ್ಪಿ ಸುಮಾರು 50 ಸಾವಿರನಷ್ಟವಾಗಿದೆ ಎಂದಿದ್ದಾರೆ. ಘಟನಾ ಸ್ಥಳಕ್ಕೆ ವೈದ್ಯ ಡಾ.ನರೇಶ್ ಭೇಟಿ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ನಾಯಿ ದಾಳಿಯಿಂದ ಕುರಿಗಳು ಸಾವನಪ್ಪಿವೆ ಎಂದು ತಿಳಿಸಿದ್ದಾರೆ. ಪಶು ಇಲಾಖೆಯಿಂದ ಅಮೃಯ ಯೋಜನೆಯಡಿ ಸರ್ಕಾರದಿಂದ ಪ್ರತಿ ಕುರಿಗೆ 5ಸಾವಿರ ಬರಲಿದೆ ಎಂದಿದ್ದಾರೆ.
[t4b-ticker]
+ There are no comments
Add yours