ಚಿತ್ರದುರ್ಗ,ಆ.12: ಕೇಂದ್ರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಹಾಗೂ ನೆಹರು ಯುವ ಕೇಂದ್ರ ಚಿತ್ರದುರ್ಗ, ಇವರ ವತಿಯಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಕಾರ್ಯಕ್ರಮದಡಿ ಭಾರತವನ್ನು ಕೊಳಕು ಮುಕ್ತ ಭಾರತವನ್ನಾಗಿಸಲು ಆ.8 ರಿಂದ 15 ರವರೆಗೆ ರಾಷ್ಟ್ರಾದ್ಯಂತ ಕೊಳಕು ಮುಕ್ತ ಭಾರತ ಎಂಬ ವಿಷಯ ಆಧಾರಿಸಿ 6 ರಿಂದ 8ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ವರ್ಧೆ ಹಾಗೂ 9 ರಿಂದ 12ನೇ ತರಗತಿ ಮಕ್ಕಳಿಗೆ ಪ್ರಬಂಧ ಸ್ವರ್ಧೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಯೋಜಿಸಲಾಗಿದೆ.ವಿದ್ಯಾರ್ಥಿಗಳು ಆ.15 ರ ಮಧ್ಯಾಹ್ನ 1 ಗಂಟೆಯೊಳಗೆ ಅಂದವಾಗಿ ಚಿತ್ರ ಪ್ರಬಂಧ ರಚಿಸಿ , ರಚಿಸಿದ ಚಿತ್ರಕಲೆ ಹಾಗೂ ಪ್ರಬಂಧವನ್ನು ಸ್ಕ್ಯಾನ ಮಾಡಿ ತಮ್ಮ ವಿಳಾಸ ದೂರವಾಣಿ ಸಂಖ್ಯೆ ಮತ್ತು ಶಾಲಾ ಗುರುತಿನಚೀಟಿ ವಿವರಗಳನ್ನು dycnvkcta@gmail.com ಅಥವಾ ವಾಟ್ಸಪ್ ಸಂಖ್ಯೆ 9066165366 ಕಳುಹಿಸಬಹುದು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಸುಹಾಸ್.ಎನ್ ಇವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 9066165366
[t4b-ticker]
+ There are no comments
Add yours