ಚಿತ್ರದುರ್ಗ: ಚಿತ್ರದುರ್ಗದ ಐತಿಹಾಸಿಕ ಶ್ರೀ ಮುರುಘಾರಾಜೇಂದ್ರ ಮಠದ ಆಡಳಿತಧಿಕಾರಿಗಳು ಹಾಗೂ ಎಸ್. ಜೆ. ಎಂ. ವಿದ್ಯಾಪೀಠದ ಗೌರವ ಕಾರ್ಯದರ್ಶಿಗಳಾಗಿ ಮಾಜಿ ಶಾಸಕ ಸರಳ ಸಜ್ಜನಿಕೆಯ ವ್ಯಕ್ತಿಯಾದ ಎಸ್. ಕೆ. ಬಸವರಾಜನ್ ಅವರು ಇಂದು ಶ್ರೀ ಮಠದ ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಅಧಿಕಾರ ವಹಿಸಿಕೊಂಡರು. ಈ ಅದ್ಭುತ ಶುಭ ಘಳಿಗೆಗೆ ಶುಭ ಸೋಮವಾರ ಸಾಕ್ಷಿಯಾಯಿತು. ಹಲವು ವರ್ಷಗಳ ಕಾಲ ಮುರುಘಾ ಮಠದ ಆಡಳಿತ ಅಧಿಕಾರಿಯಾಗಿ ಅಧಿಕಾರ ನಡೆಸಿ ಬಿಗಿ ಹಿಡಿತದ ಮೂಲಕ ಮಠವನ್ನು ಸುದೀರ್ಘವಾಗಿ ಬದಲಾವಣೆ ಪಥಕ್ಕೆ ತಂದು ಬಡವರ ಬಂಧುವಾಗಿ ಹೊರಹೊಮ್ಮಿದ್ದ ಬಸವರಾಜನ್ ಇಂದು ಮತ್ತೆ ಅಧಿಕಾರ ವಹಿಕೊಂಡಿರುವುದು ಮತ್ತೊಮ್ಮೆ ಹಳೆಯ ಚಾರ್ಮ್ ಮೂಲಕ ಮಠದ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಪರ್ವ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಧಿಕಾರ ವಹಿಸಿಕೊಂಡ ಈ ಸಂದರ್ಭದಲ್ಲಿ ವಿದ್ಯಾಪೀಠದ ನಿರ್ದೇಶಕರಾದ ಸೊಂಡೆಕೋಳ ಶ್ರೀನಿವಾಸ್, ಜಿಲ್ಲಾಪಂಚಾಯತ್ ಮಾಜಿ ಸದಸ್ಯರಾದ ಬಿ.ಟಿ ಶಾಂತಣ್ಣ ಪರಮಶಿವಯ್ಯ ಭಾಗವಹಿಸಿದ್ದರು..
[t4b-ticker]
+ There are no comments
Add yours