ಚಳ್ಳಕೆರೆ: ತಾಲೂಕಿನ ಜಾಜೂರ್ ಗ್ರಾಮದ ವಿಜಯ್ ಕುಮಾರ್ ಹಾಗೂ ಪ್ರಮೀಳಾ ಇವರ ಪುತ್ರನಾದ ಎಂ.ವಿ. ನಿತೀಶ್ ಇವರು ಉಕ್ರೇನ್ ನಲ್ಲಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದು ಈ ವಿದ್ಯಾರ್ಥಿ ಉಕ್ರೇನ್ ದೇಶದಲ್ಲಿ ಯಾವುದೇ ತೊಂದರೆ ಇಲ್ಲದೆ ಉಳಿದಿದ್ದಾರೆ ಎಂದು ಯುವಕನ ಕುಟುಂಬಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಜಾಜೂರು ಯುವಕನ ನಿವಾಸಕ್ಕೆ ತೆರಳಿ ಆತಂಕಕ್ಕೊಳಗಾಗಿದ್ದ ಕುಟುಂಬಸ್ಥರನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪೋಷಕರೊಂದಿಗೆ ಮತ್ತು ಕುಟುಂಬದವರೊಂದಿಗೆ ಮಾತನಾಡಿ ಮತ್ತು ವಿದ್ಯಾರ್ಥಿಯೊಡನೆ ದೂರವಾಣಿ ಮೂಲಕ ಮಾತನಾಡಿಸಿ ಸದರಿ ವಿದ್ಯಾರ್ಥಿ ಕ್ಷೇಮದಿಂದ ಇರುವುದಾಗಿ ಹೇಳಿದನು ಮತ್ತು ಕುಟುಂಬದ ಸದಸ್ಯರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ಹೇಳಿ ಜಿಲ್ಲಾಡಳಿತ ಹಾಗೂ ಸರ್ಕಾರ ಕುಟುಂಬದ ಜೊತೆಯಲ್ಲಿ ಇರುವುದಾಗಿ ತಿಳಿಸಿದರು. ವಿದ್ಯಾರ್ಥಿಯನ್ನು ಸರ್ಕಾರದ ವತಿಯಿಂದ ಸುರಕ್ಷಿತವಾಗಿ ವಾಪಸ್ ತರುವುದಾಗಿ ಆತ್ಮವಿಶ್ವಾಸ ಮೂಡಿಸಲಾಗಿದ್ದು ಕುಟುಂಬಸ್ಥರು ಸ್ವಲ್ಪ ಸಮಾಧಾನ ಇದ್ದಾರೆ.
[t4b-ticker]
+ There are no comments
Add yours