ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಜಿ.ಟಿ.ಸುರೇಶ್ ನೂತನ ಸಾರಥಿ.

 

 

 

 

ಚಿತ್ರದುರ್ಗ, (ಫೆ.06) : ಬಿಜೆಪಿ ಮುಖಂಡ  ಜಿ.ಟಿ. ಸುರೇಶ್ ಅವರನ್ನು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಅಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಲತ ಕೆ.ಅವರು ಆದೇಶವನ್ನು ಹೊರಡಿಸಿದ್ದಾರೆ.

ಬಿಜೆಪಿ ಗ್ರಾಮ ಗ್ರಾಮಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸುರೇಶ್ ಅವರಿಗೆ ಈ ಸ್ಥಾನ ಒಲಿದಿದೆ. ಪಕ್ಷ ಸೇವೆ ಮಾಡಿರುವವರನ್ನು ಗುರುತ್ತಿಸುತ್ತದೆ ಎಂದು ಹೇಳುತ್ತಾರೆ ಅದರಂತೆ ಅಧ್ಯಕ್ಷ ಸ್ಥಾನ ಸಿಕ್ಕಿದೆ.

 

 

ಪ್ರಾಧಿಕಾರದ ಸದಸ್ಯರಾಗಿ ರೇಖಾ.ಎ., ನಾಗರಾಜ್. ವಿ., ಉಷಾಬಾಯಿ.ಜಿ, ಮತ್ತು ಡಿ.ರಾಜು ಅವರನ್ನು ನೇಮಿಸ ಲಾಗಿದೆ. ನೂತನ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸೇರಿದಂತೆ ಪಕ್ಷದ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದ ಜಿ.ಟಿ. ಸುರೇಶ್ ಅವರು  ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ,ವೃತ್ತಿಯಲ್ಲಿ ಅಡಿಕೆ ವ್ಯಾಪಾರಿಯಾಗಿದ್ದು, ಬಿ ಎಸ್ ಸಿ (ಅಗ್ರಿ) ಪದವಿ ಪಡೆದಿದ್ದಾರ.ಪಕ್ಷ ಜನ ಸೇವೆ ಮಾಡುವ ಅವಕಾಶ ನೀಡಿದೆ. ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಪ್ರಯತ್ನಿಸುತ್ತೇನೆ’ ಎಂದು ಜಿ.ಟಿ. ಸುರೇಶ್ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours