೩ಹೆಚ್.ಎಲ್.ಕೆ.೧
ಹೊಳಲ್ಕೆರೆ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಜಿಲ್ಲಾ ಯುವ ಸಭಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ, ನೆಹರು ಯುವ ಕೇಂದ್ರ, ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮುದ್ದೇಬಿಹಾಳದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರÀ ೧೫೯ ನೇ ಜಯಂತ್ಯೂತ್ಸವದಲ್ಲಿ ಅಂಗವಾಗಿ ನೀಡಲಾಗಿರುವ ರಾಜ್ಯ ಮಟ್ಟದ ಸ್ವಾಮಿ ವಿವೇಕಾನಂದರ ಸದ್ಬಾವನಾ ಪ್ರಶಸ್ತಿಯನ್ನು ಚಿತ್ರದುರ್ಗ ಜಿಲ್ಲೆ ಯಿಂದ ವಕೀಲರು ಹಾಗೂ ಪತ್ರಕರ್ತರಾದ ಹೊಳಲ್ಕೆರೆ ಎಸ್.ವೇದಮೂರ್ತಿ ಇವರಿಗೆ ನೀಡಲಾಗಿದೆ.
ಇವರು ರಾಜ್ಯ ಯುವ ಸಂಘಗಳ ಒಕ್ಕೂಟದ ಕಾನೂನು ಸಲಹೆಗಾರರಾಗಿ ರಾಜ್ಯದಲ್ಲಿರುವ ಯುವÀ ಸಂಘದ ಒಕ್ಕೂಟದ ಕಾರ್ಯಕರ್ತರಿಗೆ ಕಾನೂನು ಮಾರ್ಗದರ್ಶನ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಹಾಗೂ ಸಾಂಸ್ಕೃತಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ರಾಜ್ಯ ಸ್ವಾಮಿ ವಿವೇಕಾನಂದ ಸದ್ಬಾವನಾ ಪ್ರಶಸ್ತಿಯನ್ನು ನೀಡಲಾಗಿದೆ.
ಮುದ್ದೇಬಿಹಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಗುರುಸಿದ್ದರಾಮೇಶ್ವರ ಸ್ವಾಮಿಜೀಗಳು ವಹಿಸಿಕೊಂಡು ಪ್ರಶಸ್ತಿ ಪ್ರಧಾನ ಮಾಡಿದರು. ನಂದಿವೇರಿ ಕಪ್ಪತ್ತು ಗುಡ್ಡದ ಶ್ರೀ ಮ.ನಿ.ಪ್ರ ಶಿವಕುಮಾರ್ ಸ್ವಾಮಿಗಳು, ಕುಂಟೋಜಿ ಡಾ.ಚನ್ನವೀರದೇವರಗಳು, ಶ್ರೀ ಬಾಲಶಿವಯೋಗಿ ಸಿದ್ದಲಿಂಗದೇವರು, ರಾಜ್ಯ ಯುವ ನೆಹರು ಕೇಂದ್ರ ನಿರ್ದೇಶಕರಾದ ನಟರಾಜ್, ರಾಷ್ಟಿçÃಯ ಯುವ ಪ್ರಶಸ್ತಿ ಪುರಸ್ಕೃತ ಜಾವೀದ್ ಜಮೇದಾರ್, ರಾಜ್ಯ ಯುವ ಒಕ್ಕೂಟಗಳ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಬಾಲಾಜಿ, ಜಿಲ್ಲಾಧ್ಯಕ್ಷರಾದ ಪುಂಡಲೀಕ ಯು ಮುರಾಳ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
[t4b-ticker]
+ There are no comments
Add yours