ಗುಂಡಿಗೆ ಇಳಿದ ದ್ವಿಚಕ್ರ ವಾಹನ ಆಯತಪ್ಪಿ ಗುಂಡಿಗೆ ಬಿದ್ದ ಶಿಕ್ಷಕಿ ಮೇಲೆ ಬೊಲೆರೊ‌ ವಾಹನ ಹಾದು ಸಾವು

 

 

 

 

ಬೆಂಗಳೂರು: ರಸ್ತೆಯಲ್ಲಿನ ಗುಂಡಿಯಿಂದಾಗಿ ದ್ವಿಚಕ್ರ ವಾಹನದಿಂದ ಆಯತಪ್ಪಿ ಬಿದ್ದ ಶಿಕ್ಷಕಿಯೊಬ್ಬರ ಮೇಲೆ ವಾಹನ ಸಾಗಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಮಾಗಡಿ‌ ಮುಖ್ಯರಸ್ತೆಯ ಬ್ಯಾಡರಹಳ್ಳಿ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.

ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದ ಶರ್ಮಿಳಾ ಸಾವಿಗೀಡಾಗಿದ್ದು, ಅವರ ಪತಿ ಪ್ರಕಾಶ್​ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

ಶರ್ಮಿಳಾ-ಪ್ರಕಾಶ್ ದಂಪತಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಅಂಜನನಗರ ಬಳಿ ಈ ಅವಘಡ ಉಂಟಾಗಿದೆ. ರಸ್ತೆಯಲ್ಲಿ ಪೈಪ್​ಲೈನ್​ ಕಾಮಗಾರಿಗೆಂದು ಅಗೆದು ಗುಂಡಿ ಉಂಟಾಗಿದ್ದು, ಅದನ್ನು ದುರಸ್ತಿಗೊಳಿಸಿಲ್ಲ. ಇದರಿಂದಾಗಿ ದ್ವಿಚಕ್ರವಾಹನ ಆಯತಪ್ಪಿದ್ದು, ಆಕೆ ಕೆಳಕ್ಕೆ ಬಿದ್ದಿದ್ದಾರೆ. ಅವರ ಮೇಲೆ ಬೊಲೆರೊ ವಾಹನ ಸಾಗಿ, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಈಕೆ ವಿಜಯನಗರ ಸಮೀಪದ ಮೂಡಲ ಪಾಳ್ಯದಿಂದ ಮಾದನಾಯಕನಹಳ್ಳಿಯಲ್ಲಿರುವ ಸಹೋದರನ ಮನೆಗೆ ಪತಿಯೊಂದಿಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆಗುಂಡಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿತ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು

[t4b-ticker]

You May Also Like

More From Author

+ There are no comments

Add yours