ಶಿವನ ಆರಾಧನೆ ಹಾಗೂ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ:ಶ್ರೀ ಮಾದಾರ ಚನ್ನಯ್ಯ ಶ್ರೀ

 

 

 

 

ಚಿತ್ರದುರ್ಗ ಜ. ೨೨
ಶಿವನ ಆರಾಧನೆ ಹಾಗೂ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮ ಮಹಾ ಶಿವರಾತ್ರಿ ಮಹೋತ್ಸವದ ೯೨ನೇ ಶಿವನಾಮ ಸಪ್ತಾಹವಾಗಲಿ ಎಂದು ಮಾದಾರ ಗುರು ಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ನಗರದ ಶ್ರೀ ಕಬೀರಾನಂದಾಶ್ರಮದವತಿಯಿAದ ನಡೆಯುವ ಶಿವರಾತ್ರಿ ಮಹೋತ್ಸವದ ೯೨ನೇ ಶಿವನಾಮ ಸಪ್ತಾಹದ ಪೂರ್ವಬಾವಿ ಸಭೆಯ ಸಮ್ಮುಖವಹಿಸಿ ಮಾತನಾಡಿದ ಶ್ರೀಗಳು, ವರ್ಷದಿಂದ ವರ್ಷಕ್ಕೆ ಶಿವರಾತ್ರಿಯ ಶಿವನಾಮ ಸಪ್ತಾಹವೂ ಚನ್ನಾಗಿ ಮೂಡಿ ಬರುತ್ತಿದೆ. ಕಳೆದ ಬಾರಿ ಕರೋನ ಪ್ರಾರಂಭವಾಗಿತ್ತು ಆದರೆ ಈ ಬಾರಿ ಕರೋನ ಮುಗಿಯುವ ಹಂತಕ್ಕೆ ತಲುಪಿದೆ. ಶಿವನಾಮ ಸಪ್ತಾಹ ನಡೆಯುವುದು ಕಬೀರಾನಂದಾಶ್ರಮದಲ್ಲಿ ಮಾತ್ರ. ಈ ಹಿಂದೆ ಸೀಮಿತವಾಗಿದ್ದ ಆಚರಣೆ ಶಿವಲಿಂಗಾನAದ ಶ್ರೀಗಳು ಬಂದ ಮೇಲೆ ನಾಡಿನಾದ್ಯಾಂತ ಹೆಸರನ್ನು ಮಾಡುವ ರೀತಿಯಲ್ಲಿ ಆಚರಣೆಯಾಗುತ್ತಿದೆ ಎಂದರು.
ಶಿವರಾತ್ರಿಯ ಶಿವನಾಮ ಸಪ್ತಾಹವೂ ಸಾಂಸ್ಕೃತಿಕ, ಆಧ್ಯಾತ್ಮಿಕ ಶ್ರದ್ದಾ ಭಕ್ತಿಯ ಉತ್ಸವವಾಗಬೇಕಿದೆ. ನಮ್ಮ ಜನಪದ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯಬೇಕಿದೆ. ಶಿವನ ಆರಾಧನೆ ಮಾಡುವುದರ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಈ ಕಾರ್ಯಕ್ರಮದಲ್ಲಿ ಮಾಡಬೇಕಿದೆ. ಕಳೆದ ಬಾರಿ ಕಾರ್ಯಕ್ರಮದ ವೆಚ್ಚದಲ್ಲಿ ಹೆಚ್ಚಳವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ತಮ್ಮ ದುಡಿಮೆಯಲ್ಲಿ ಧರ್ಮಕ್ಕಾಗಿ ಸ್ವಲ್ಪ ಹಣವನ್ನು ತೆಗೆದಿಡಬೇಕಿದೆ ಅದರಂತೆ ಈ ಬಾರಿಯೂ ಶೇ. ೨೫ರಷ್ಟು ವೆಚ್ಚ ಹೆಚ್ಚಾಗಲಿದೆ ಇದರಿಂದ ಭಕ್ತಾಧಿಗಳು ಉದಾರವಾಗಿ ದಾನ ಮಾಡುವುದರ ಮೂಲಕ ಶಿವರಾತ್ರಿ ಸಪ್ತಾಹಕ್ಕೆ ನೆರವಾಗಬೇಕಿದೆ ಎಂದು ಶ್ರೀಗಳು ತಿಳಿಸಿದರು.
ಶಿವರಾತ್ರಿಯ ಶಿವನಾಮ ಸಪ್ತಾಹದಲ್ಲಿ ಶ್ರೀಗಳು ನೀಡಿದ ಕೆಲಸವನ್ನು ಮಾಡುವುದಾಗಿ ತಿಳಿಸಿ, ಈ ಬಾರಿಯ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡುವ ಭರವಸೆಯನ್ನು ನೀಡಿದ ಶ್ರೀಗಳು, ಶಿವರಾತ್ರಿ ಮಹೋತ್ಸವ ದೇಶದ ಗಮನ ಸೆಳೆಯುವ ಕಾರ್ಯವಾಗಬೇಕಿದೆ ಎಂದು ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಕಭೀರಾನಂದಾಶ್ರಮದ ಶ್ರೀ ಶಿವಲಿಂಗಾನAದ ಶ್ರೀಗಳು, ಸರ್ಕಾರ ವಾರದ ಕರ್ಪ್ಯೂವನ್ನು ತೆರೆಯುವುದರ ಮೂಲಕ ನಮ್ಮ ಆತಂಕವನ್ನು ದೂರ ಮಾಡಿದೆ. ಕರೋನ ನಿಯಮದಡಿಯಲ್ಲಿ ನಮ್ಮ ಕಾರ್ಯಕ್ರಮವನ್ನು ಮಾಡಲಾಗುವುದು. ಹಣವನ್ನು ನೀಡುವಾಗ ಕೆಲವರು ಮುಖವನ್ನು ಗಂಟು ಮಾಡುತ್ತಾರೆ. ಆದರೆ ಕೆಲವರು ಸಂತೋಷದಿAದ ನೀಡುತ್ತಾರೆ. ಸದ್ಬಾವನೆಯಿಂದ ಶ್ರೀಮಠ ನಡೆಯುತ್ತಿದೆ ಎಂದು ತಿಳಿಸಿದರು.

 

 

ಭಕ್ತಿಯಿಂದ ಕೆಲಸ ಮಾಡಿದಾಗ ನಮ್ಮ ಸಂಕಷ್ಟಗಳು ದೂರವಾಗಲಿದೆ. ತಮ್ಮ ಸೇವೆ ಅನನ್ಯವಾಗಿರಲಿ ಅಚ್ಚುಕಟ್ಟಾಗಿ ಶಿವರಾತ್ರಿ ಸಪ್ತಾಹ ನಡೆಯಬೇಕಿದೆ. ಇದಕ್ಕ ಎಲ್ಲರ ಸಹಕಾರ, ಸಹಾಯ ಅಗತ್ಯವಾಗಿದೆ ಎಂದು ಶಿವಲಿಂಗಾನAದ ಶ್ರೀಗಳು ಹೇಳಿದರು.
ಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಮಾತನಾಡಿ, ಕಳೆದ ಬಾರಿ ಶಿವರಾತ್ರಿ ಮಹೋತ್ಸವದ ಸಮಯದಲ್ಲಿ ಕರೋನಾ ಅಲೆ ಪ್ರಾರಂಭವಾಗಿತ್ತು ಆದರೆ ಈ ಬಾರಿ ಅದು ಮುಗಿಯುವ ಹಂತ ತಲುಪಿದೆ. ಕಳೆದ ಬಾರಿಯ ಕಾರ್ಯಕ್ರಮದಲ್ಲಿ ಅನೇಕ ಮಂತ್ರಿಗಳು ಅನಿವಾರ್ಯ ಕಾರಣದಿಂದ ಆಗಮಿಸಿಲ್ಲ, ಆದರೆ ಈ ಬಾರಿ ಸಾಧ್ಯವಾದಷ್ಟು ಸಚಿವರನ್ನು ಕರೆತರುವ ಕಾರ್ಯವನ್ನು ಮಾಡಲಾಗುವುದು. ಕಳೆದ ಬಾರಿ ಉಸ್ತುವಾರಿ ಸಚಿವರನ್ನು ಕರೆತರಲಾಗಲಿಲ್ಲ ಆದರೆ ಈ ಬಾರಿ ಮುಂಚಿನಿAದಲೇ ಕಾರ್ಯಕ್ರಮಕ್ಕೆ ಕರೆ ತರುವ ಕಾರ್ಯವನ್ನು ಪ್ರಮಾಣಿಕವಾಗಿ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀ ಗುರು ಕಬೀರಾನಂದಾಶ್ರಮದ ಕಾರ್ಯದರ್ಶೀ ವಿ.ಎಲ್.ಪ್ರಶಾಂತ್‌ಕುಮಾರ್ ಮಾತನಾಡಿ ಈ ವರ್ಷ ಫೆ. ೨೨ ರಿಂದ ಮಾ.೦೧ರವರೆಗೆ ಮಹಾ ಶಿವರಾತ್ರಿ ಮಹೋತ್ಸವ ೯೨ನೇ ಶಿವನಾಮ ಸಪ್ತಾಹ ನಡೆಯಲಿದೆ. ಕಳೆದ ೨ ವರ್ಷದಿಂದ ಸುರಕ್ಷತೆಯನ್ನು ತೆಗೆದುಕೊಂಡು ಕಾರ್ಯಕ್ರಮವನ್ನು ಮಾಡಲಾಗಿದೆ. ೯೧ನೇ ಸಪ್ತಾಹದಲ್ಲಿ ದಾನಿಗಳಿಂದ ಸಂಗ್ರಹವಾದ ಹಣದ ಜೊತೆಗೆ ಶ್ರೀಮಠದಿಂದ ಹಣವನ್ನು ಹಾಕುವುದರ ಮೂಲಕ ಕಾರ್ಯಕ್ರಮ ಮಾಡಲಾಯಿತು. ಈ ಬಾರಿ ಕಳೆದ ಬಾರಿಗಿಂತ ಖರ್ಚು ಹೆಚ್ಚಾಗಲಿದೆ. ಇದರಿಂದ ದಾನಿಗಳು ಭಕ್ತಾಧಿಗಳು ಉದಾರವಾಗಿ ದಾನವನ್ನು ಮಾಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೆ ಕಾರಣರಾಗಬೇಕಿದೆ ಎಂದು ಮನವಿ ಮಾಡಿದರು.
ಈ ಬಾರಿ ಕಾರ್ಯಕ್ರಮವನ್ನು ಎಲ್ಲರು ನೋಡುವಂತೆ ಆನ್‌ಲೈನ್‌ನಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಇದರಿಂದ ಆಯವ್ಯಯದಲ್ಲಿ ವ್ಯತ್ಯಾಸವಾಗಲಿದೆ ಇದರಿಂದ ದಾನ ಮಾಡುವವರು ಉದಾರವಾಗಿ ಮಾಡಬೇಕಿದೆ. ಅಲ್ಲದೆ ಬೇರೆಯವರಿಂದಲೂ ದಾನವನ್ನು ಕೂಡಿಸುವ ಕಾರ್ಯಕ್ಕೆ ಮುಂದಾಗುವAತೆ ಪ್ರಶಾಂತ್ ಕೋರಿದರು.
ಕಾರ್ಯಕ್ರಮದಲ್ಲಿ ನಾಗರಾಜ್ ಸಂಗA, ಗೋಪಾಲಸ್ವಾಮಿ ನಾಯಕ್, ಮಂಜುನಾಥ್ ಗುಪ್ತ, ಭದ್ರಾವತಿ ಶ್ರೀಮಠದ ಕಾರ್ಯದರ್ಶಿ ರಾಮಮೂರ್ತಿ, ಗುತ್ತಿಗೆದಾರರಾದ ಸತೀಶ್, ವೀರಣ್ಣ, ನಗರಸಭಾ ಸದಸ್ಯರಾದ ವೆಂಕಟೇಶ್ ಶಿವರಾತ್ರಿ ಮಹೋತ್ಸವದ ೯೨ನೇ ಶಿವನಾಮ ಸಪ್ತಾಹ ಕಾರ್ಯಕ್ರಮದ ಬಗ್ಗೆ ಸಲಹೆ, ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್ ಉಪಸ್ಥಿತರಿದ್ದರು.ಸುಬ್ರಾಯ್ ಭಟ್‌ರು ವೇದ ಘೋಷ ವಾಚನ ಮಾಡಿದರೆ.ಶಿಕ್ಷಕಿ ಜ್ಯೋತಿ ಪ್ರಾರ್ಥಿಸಿದರು, ಪ್ರಶಾಂತ್ ಸ್ವಾಗತಿಸಿದರು. ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

[t4b-ticker]

You May Also Like

More From Author

+ There are no comments

Add yours