ಚಳ್ಳಕೆರೆ : ವಿದ್ಯುತ್ ತಂತಿ ತಗುಲಿ ಎಮ್ಮೆ ಸಾವನ್ನಪ್ಪಿರುವ ಘಟನೆ ಭಾನುವಾರ ಬುಡ್ನನಹಟ್ಟಿ ಲಂಬಾಣಿ ಹಟ್ಟಿ ಯಲ್ಲಿ ನಡೆದಿದೆ.
ಗ್ರಾಮದ ಚಂದ್ರನಯ್ಕ್ ಅವರಿಗೆ ಸೇರಿದ ಎಮ್ಮೆಯಾಗಿದ್ದು ಮೇಯಲು ಬಿಟ್ಟಿರುವ ಸಮಯದಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬದಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ತಾಗಿರುವುದರಿಂದ ತಂತಿಗಳಿಗೆ ಎಮ್ಮೆ ಉಜ್ಜಿಕೊಂಡ ಪರಿಣಾಮ ಎಮ್ಮೆಗೆ ವಿದ್ಯುತ್ ತಗುಲಿದೆ ಇದರಿಂದ ಎಮ್ಮೆ ಸಾವನ್ನಪ್ಪಿದೆ.
ಚಂದ್ರನಾಯ್ಕ್ ಅವರು 15 ಸಾವಿರ ಬಾಳುವ ಎಮ್ಮೆಯಾಗಿದೆ. ಇನ್ನು ಶಿಥಿಲಗೊಂಡಿರುವ ವಿದ್ಯುತ್ ಕಂಬದ ಸುತ್ತಮುತ್ತಲು ಚಿಕ್ಕಮಕ್ಕಳ ಆಟವಾಡುತ್ತಾರೆ, ಆದ್ದರಿಂದ ಶಿಥಿಲಗೊಂಡಿರುವ ಕಂಬದ ಸುತ್ತಮುತ್ತ ಬೆಸ್ಕಾ ಇಲಾಖೆಯಿಂದ ಮುಳ್ಳಿನ ಬೇಲಿ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
[t4b-ticker]
+ There are no comments
Add yours