ನಾಯಕನಹಟ್ಟಿಯಲ್ಲಿ ಇಂದು ನಡೆದ ಉಚಿತ ಕೋವಿಡ್-19 ಲಸಿಕೆ ಮೆಗಾ ಕ್ಯಾಂಪ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಡಾಕ್ಟರ್ ಮಲ್ಲಿಕಾರ್ಜುನಯ್ಯ ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಎಂ ಉಮೇಶ್ ಗೌಡ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಮಲ್ಲಿಕಾರ್ಜುನಯ್ಯನವರು ನಾಯಕನಹಟ್ಟಿಯಲ್ಲಿ ಬಹಳಷ್ಟು ಮಂದಿ ಲಸಿಕೆಯನ್ನು ಪಡೆದಿಲ್ಲ ಆರೋಗ್ಯವಂತರಾಗಿರಬೇಕು ಎಂದರೆ ಲಸಿಕೆಯನ್ನು ಎಲ್ಲರೂ ತಪ್ಪದೇ ತಗೊಳ್ಳಿ, ಯಾರು ಸಹ ಲಸಿಕೆ ತೆಗೆದುಕೊಳ್ಳಲು ಹೆದರುವ ಅವಶ್ಯಕತೆ ಇಲ್ಲ ಎಂದು ಜನರಿಗೆ ಮನದಟ್ಟು ಮಾಡಿದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾದ ಕೋಡಿ ಭೀಮರಾಯ ಮಾತನಾಡಿ ಈ ಕಾರ್ಯಕ್ರಮವನ್ನು ಆಯೋಜಿಸಿದವರಿಗೆ ನನ್ನ ಕಡೆಯಿಂದ ತುಂಬಾ ಧನ್ಯವಾದಗಳನ್ನು ಹೇಳೋಕೆ ಇಷ್ಟ ಪಡುತ್ತೇನೆ ಮತ್ತುಪಟ್ಟಣದ ಎಲ್ಲ ಜನರು ಗೋಬಿ ಲಸಿಕೆಯನ್ನು ಪಡೆಯಿರಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಉಮೇಶಗೌಡ ರವರು ಮಾತನಾಡಿ ಪಟ್ಟಣದ ಜನರನ್ನು ಹೋಗಲಾಡಿಸಲು ಪಡೆಯಿರಿ ಎಂದು ಹೇಳಿದರು ನಾಯಕನಹಟ್ಟಿ ಭಾಗದಲ್ಲಿ ಇಷ್ಟು ದಿನ ಕೇವಲ 30 ಪರ್ಸೆಂಟ್ ಲಸಿಕೆಯನ್ನು ಜನರು ಪಡೆದಿದ್ದರು ಆದುದರಿಂದ ನಾವು ಈ ಕಾರ್ಯಕ್ರಮ ಮಾಡಲು ಮುಂದಾದೆವು ಜನರಿಗೆ ಮೂರನೇ ಅಲೆ ಭೀತಿಯನ್ನು ಹೋಗಲಾಡಿಸಲು ಲಸಿಕೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕೋ ವ್ಯಾಕ್ಸಿನ್ ಮತ್ತು ಕೋವಿಶೀಲ್ದಾ ಲಸಿಕೆಯನ್ನು ಜನರಿಗೆ ನೀಡುವ ಕಾರ್ಯಕ್ರಮವನ್ನು ಮಾಡಲಿದ್ದೇವೆ. ಇದು ಮೆಗಾ ಕ್ಯಾಂಪೈನ್ ಆಗಿರೋದರಿಂದ ಎಲ್ಲಾ ರೀತಿಯ ಉಪಯೋಗ ಜನರಿಗೆ ಆಗುತ್ತದೆ ಈ ಕಾರ್ಯಕ್ರಮವನ್ನು ಆಯೋಜಿಸಲು ನನ್ನ ಸ್ನೇಹಿತರಾದ ಯುವ ಕಾಂಗ್ರೆಸ್ ಕಾರ್ಯಕರ್ತರು ಬಹಳ ಸಹಾಯವನ್ನು ಮಾಡಿದರು ಮತ್ತು ತಾಸಿಲ್ದಾರ್ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಸಹ ನಮಗೆ ಸಾಕಾರವನ್ನು ನೀಡಿದರು ಎಂದು ಹೇಳಿದರು, ಈ ಸಂದರ್ಭದಲ್ಲಿ ಡಾಕ್ಟರ್ ಓಬಣ್ಣ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಿಬಿ ಬೋರ ನಾಯ್ಕ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಅನ್ವರ್, ಪಾಲಾಕ್ಷಪ್ಪ, ಜಿಬಿ ಮುದಿಯಪ್ಪ, ಪಂಚಾಕ್ಷರಿಸ್ವಾಮಿ, ವರವು ಉಮೇಶ್, ಜಿ ಟಿ ತಿಪ್ಪೇಶ್,ಮಲ್ಲೂರಹಟ್ಟಿ ಬಸವರಾಜ್, ಮಣಿಕಂಠ, ಆರೋಗ್ಯಧಿಕಾರಿ ಸತೀಶ್, ಚನ್ನಕೇಶವ ಪೊಲೀಸ್, ಆಶಾ ಕಾರ್ಯಕರ್ತರು, ಮುಖಂಡರುಗಳು ಮೊದಲದವರು ಭಾಗವಹಿಸಿದರು.
[t4b-ticker]
+ There are no comments
Add yours