challakere: ತಾಲ್ಲೂಕಿನ ಗೋಪನಹಳ್ಳಿ ಕ್ರಾಸ್ನ ಯಾದವ ನಗರದ ಬಳಿ ಖಾಸಗಿ ಬಸ್ಸೊಂದು ಮೋಟಾರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಚಾಲಕ ಮೀರಸಾಬಿಹಳ್ಳಿಯ ನಾಗೇಗೌಡ(೩೫) ಚಿಕಿತ್ಸೆ ಫಲಕಾರಿಯಾಗದೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ.
ಸದರಿ ಬಸ್ ಗೋಪನಹಳ್ಳಿಯಿಂದ ಚಳ್ಳಕೆರೆ(challakere) ಕಡೆಗೆ ಬರುತ್ತಿದ್ದು, ನಾಗೇಗೌಡ ತನ್ನದೇಯಾದ ಬೈಕ್ನಲ್ಲಿ ಹೆಂಡತಿ ಕಾವ್ಯಳೊಂದಿಗೆ ಗೋಪನಹಳ್ಳಿ ಕಡೆಗೆ ಚಲಾಯಿಸುತ್ತಿದ್ದು, ಎದುರಿಗೆ ಬಂದ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಮರಳಿ ಕೈ ಹಿಡಿದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
ವೈದ್ಯರು ನಾಗೇಗೌಡ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಸ್ ಚಾಲಕ ಶ್ರೀನಿವಾಸನ ವಿರುದ್ದ ಪಿಎಸ್ಐ ಜೆ.ಶಿವರಾಜ್ ಪ್ರರಕರಣ ದಾಖಲಿಸಿದ್ಧಾರೆ.
ಪೋಟೋ೨೪ಸಿಎಲ್ಕೆ೪ ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದ ದೃಶ್ಯ.
ಪೋಟೋ೨೪ಸಿಎಲ್ಕೆ೦೪ ಮೃತಪಟ್ಟ ನಾಗೇಗೌಡ ಭಾವಚಿತ್ರ.
ನಗರದ ಎಪಿಎಂಸಿ ಕಚೇರಿಯ ಸಾರ್ವಜನಿಕ ರಸ್ತೆಯಲ್ಲಿ ಹಮಾಲಿ ಸಂಘದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ವೀರಣ್ಣ(೭೦) ಎಂಬಾತನ ಹಾಡುಹಗಲೇ ಮಟ್ಕಾ ಚೀಟಿ ಬರೆಯುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಮಟ್ಕಾ ಹಣ ೩೩೫೦ರೂಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಗಾಂಧಿನಗರದ ಬಾರ್ಬೈಂಡಿಕ್ ಕೆಲಸ ನಿರ್ವಹಿಸುವ ಅಬ್ದುಲ್ ವಹಾಬ್(೩೦) ತನ್ನ ಕೈಗೆ ಆದ ನೋವಿನಿಂದ ಮಧ್ಯವೆಸನಿಯಾಗಿದ್ದು, ಅತಿಯಾದ ಕುಡಿತದಿಂದ ಹೆಂಡತಿ ಬೇಸತ್ತು ತವರಿಗೆ ತೆರಳಿದ್ದಳು. ನೊಂದ ಅಬ್ದುಲ್ ವಹಾಬ್ ತನ್ನ ಬಾಡಿಗೆ ಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.
ಹೊಟ್ಟೆಪ್ಪನಹಳ್ಳಿ ಕ್ರಾಸ್ ಬಳಿ ಭತ್ತ ಕಟಾವು ಮಾಡುವ ಕಾರ್ಟರ್ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ನಲ್ಲೂರಹಳ್ಳಿಯ ಚಿಕ್ಕಣ್ಣ(೭೦) ಗಾಯಗೊಂಡಿರುತ್ತಾನೆ. ಬೈಕ್ ಜಖಂಗೊAಡಿದ್ದು ಕಾರ್ಟರ್ ವಾಹನ ಚಾಲಕ ಸುಖಮುನಿ ವಿರುದ್ದ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
+ There are no comments
Add yours