ಬೆಂಗಳೂರು: ಬಿಜೆಪಿಗೆ ಬಿಗ್ ಶಾಕ್ ಕೊಡಲು ಕಾಂಗ್ರೆಸ್ ರಣತಂತ್ರ ರೂಪಿಸಿದ್ದು, ದೊಡ್ಡ ವಿಕೆಟ್ ಉರುಳಿಸೋಕೆ ಪ್ಲಾನ್ ಮಾಡಿದೆ. ಮಗ ಶರತ್ ಬಚ್ಚೇಗೌಡ ಗೆಲುವಿಗೆ ಸಂಸದ ಬಚ್ಚೇಗೌಡ ಪಣ ತೊಟ್ಟಿದ್ದು, ಪುತ್ರನ ಪರ ಭರ್ಜರಿಯಾಗಿ ಪ್ರಚಾರ ನಡೆಸ್ತಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರೋ ಕಾಂಗ್ರೆಸ್, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡರಿಂದ ರಾಜೀನಾಮೆ ಕೊಡಿಸಲು ಮುಂದಾಗಿದೆ ಎನ್ನಲಾಗ್ತಿದೆ. ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆ ‘ಕೈ’ ಅಭ್ಯರ್ಥಿ ಆಗಿದ್ದಾರೆ. ಕಳೆದ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲದಿಂದ ಶರತ್ ಗೆದ್ದಿದ್ದರು.
ಎಂಟಿಬಿ ನಾಗರಾಜ್ ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಹೋದ ನಂತರ ಹೊಸಕೋಟೆಗೆ ಉಪಚುನಾವಣೆ ಎದುರಾಗಿತ್ತು. ಈ ಚುನಾವಣೆಯಲ್ಲಿ ಸ್ವಾಭಿಮಾನದ ಅಸ್ತ್ರ ಪ್ರಯೋಗ ಮಾಡಿ ಎಂ.ಟಿ.ಬಿ. ನಾಗರಾಜ್ರನ್ನ ಸೋಲಿಸಿದ್ದರು. ನಂತರ ಶರತ್ ಬಚ್ಚೇಗೌಡ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ಉಪಚುನಾವಣೆಯಲ್ಲಿ ಪುತ್ರನ ಪರ ಕೆಲಸ ಮಾಡಿರುವ ಆರೋಪ ಬಚ್ಚೇಗೌಡರ ಮೇಲಿದೆ. ಶರತ್ ಪರ ಕೆಲಸ ಮಾಡಿ ಬಚ್ಚೇಗೌಡ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂಬ ಆರೋಪವನ್ನು ಎಂಟಿಬಿ ನಾಗರಾಜ್ ಬೆಂಬಲಿಗರು ಮಾಡುತ್ತಿದ್ದಾರೆ.
[t4b-ticker]
+ There are no comments
Add yours