ಬಾಗಲಕೋಟೆ: ರಾಜ್ಯದ ಪ್ರಸಿದ್ಧ ಮಠಗಳಲ್ಲಿ ಒಂದಾದ ಕೋಡಿಮಠದ ಡಾ.ಶ್ರೀ ಶಿವಾನಂದ ರಾಜೇಂದ್ರ ಸ್ವಾಮಿಜಿಗಳು ಆಗಾಗ ಭವಿಷ್ಯ ವಾಣಿ ನುಡಿಯುತ್ತಾ ಇರುತ್ತಾರೆ. ಇದೀಗ ಮುಂಬರುವ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಅವರು ಭವಿಷ್ಯವಾಣಿ ಹೇಳಿದ್ದಾರೆ.
ಯುಗಾದಿ ನಂತರ ಪ್ರಕೃತಿ ವಿಕೋಪ ಆಗೋದಿಲ್ಲ ಅಂತ ಹೇಳೋದಿಲ್ಲ. ರಾಜಕೀಯ ಅಸ್ಥಿರತೆ ಇದೆ ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ. ಚುನಾವಣೆವರೆಗೂ ಏನು ಹೇಳೋಕೆ ಆಗೋದಿಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೆ ಆಗಲಿ ತಪ್ಪು ಇರಲಿ ಸರಿ ಇರಲಿ, ನಾವು ಏನು ಮಾಡುತ್ತೇವೆ ಬಿತ್ತಿದ್ದೆ ಬೆಳೆಯೋದು. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಬಗ್ಗೆ ಸ್ವಾಮಿಜಿಗಳು ಎಲ್ಲರಿಗು ಒಳ್ಳೆಯದಾಗಲಿ ಎಂದು ಶುಭ ನುಡಿದಿದ್ದಾರೆ.
[t4b-ticker]
+ There are no comments
Add yours