ಭಾರತದಲ್ಲಿರೋರೆಲ್ಲಾರು ಹಿಂದೂಗಳೇ.ಭಾರತ ಒಂದು ಹಿಂದೂ ರಾಷ್ಟ್ರ ಅಂತ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯ ಜನರಲ್ ಸೆಕ್ರಟರಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಕಾರ್ಯಕ್ರಮ ಒಂದ್ರಲ್ಲಿ ಮಾತಾಡಿದ ಹೊಸಬಾಳೆ, ಭಾರತದಲ್ಲಿ ವಾಸಿಸೋರೆಲ್ಲ ಹಿಂದೂಗಳು.
ಯಾಕಂದ್ರೆ ಅವರ ಪೂರ್ವಜರು ಹಿಂದೂಗಳಾಗಿದ್ರು. ಇದನ್ನ ಒಪ್ಪಿಕೊಳ್ಳೋಕೆ ಯಾರು ಹಿಂಜರಿಬಾರ್ದು ಹಾಗೂ ಅವಮಾನ ಪಟ್ಕೋಬಾರ್ದು. ಇದೇ ಸತ್ಯ. ಭಾರತದಲ್ಲಿ ಇರೋರಿಗೆ ಅವರು ಪೂಜಿಸುವ ವಿಧಾನವನ್ನ ಆಯ್ಕೆ ಮಾಡಿಕೊಳ್ಳೋಕೆ ಹಕ್ಕಿದೆ. ಆದ್ರೆ ಅವರೆಲ್ಲರ ಡಿಎನ್ಎ ಒಂದೇ ಅಂತ ಹೇಳಿದ್ದಾರೆ. ಜೊತೆಗೆ RSS ಕಾರ್ಯಕರ್ತರು ಬಲಪಂಥೀಯರೂ ಅಲ್ಲ ಅಥವಾ ಎಡಪಂಥೀಯರೂ ಅಲ್ಲ. ಅವರು ರಾಷ್ಟ್ರವಾದಿಗಳು. RSS ದೇಶದ ಹಿತಾಸಕ್ತಿಗೋಸ್ಕರ ಕೆಲಸ ಮಾಡುತ್ತೆ ಅಂತ ಹೇಳಿದ್ದಾರೆ. ಇದೇ ವೇಳೆ ಯಾರಾದ್ರೂ ಒತ್ತಡಕ್ಕೆ ಮಣಿದು ಗೋಮಾಂಸವನ್ನ ಸೇವಿಸಿದ್ರೆ, ಧರ್ಮವನ್ನ ಬಿಟ್ಟಿದ್ರೆ ಅವ್ರಿಗೆ ಹಿಂದೂತ್ವದ ಬಾಗಿಲು ತೆರೆದೇ ಇದೆ. ಅವರು ಈವಾಗ್ಲೂ ಹಿಂದುತ್ವಕ್ಕೆ ವಾಪಾಸ್ ಬರಬಹುದು ಅಂತ ಹೊಸಬಾಳೆ ಹೇಳಿದ್ದಾರೆ. ಈ ಮೂಲಕ ಮುಸ್ಲಿಮರು ಸೇರಿದಂತೆ ಅನ್ಯಧರ್ಮಕ್ಕೆ ಮತಾಂತಾರ ಆಗಿರೋ ಎಲ್ಲಿರಿಗೂ ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಆರೆಸ್ಸೆಸ್ ಪರೋಕ್ಷವಾಗಿ ಕರೆಕೊಟ್ಟಿದೆ. ಈ ಹಿಂದಿನಂದಲೂ ಸಹ ಆರೆಸ್ಸೆಸ್ ಭಾರತದ ಮುಸ್ಲಿಮರನ್ನ ಹಾಗೇ ಭಾರತದ ಕ್ರಿಶ್ಚಿಯನ್ನರನ್ನ ಪೂರ್ವ ಹಿಂದೂಗಳು ಅಂದ್ರೆ ಈ ಮುಂಚೆ ಹಿಂದೂಗಳಾಗಿದ್ದವರು ಅಂತ ಹೇಳ್ತಾನೇ ಇದೆ. ಈಗ ಅದನ್ನ ಮತ್ತೊಮ್ಮೆ ಹೇಳುವ ಮೂಲಕ ಅವರೆಲ್ಲಾ ಹಿಂದುತ್ವಕ್ಕೆ ವಾಪಾಸ್ಸಾಗಿ ಅನ್ನೋ ಸಂದೇಶವನ್ನ ಕೊಟ್ಟಿದೆ.
[t4b-ticker]
+ There are no comments
Add yours