ಚಿತ್ರದುರ್ಗ: ಶ್ರೀ ಅಹೋಬಲ ಟಿವಿಎಸ್ ಕಂಪನಿಯು ಚಿತ್ರದುರ್ಗ ತಾಲೂಕಿನ ಜನತೆಗೆ ಉತ್ತಮ ಸೇವೆ ನೀಡುತ್ತಿದ್ದು ಜಿಲ್ಲೆಯಾದ್ಯಂತ ಬ್ರಾಂಚ್ ಗಳನ್ನ ಆರಂಭಿಸುವ ಮೂಲಕ ಮತ್ತಷ್ಟು ಯಶಸ್ಸು ಪಡೆಯಲಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಶಂಕರ್ ಟ್ಯಾಕೀಸ್ ಬಳಿಯಲ್ಲಿ ಶ್ರೀ ಅಹೋಬಲ ಟಿವಿಎಸ್ ಕಂಪನಿಯಿಂದ ಏರ್ಪಡಿಸಿದ್ದ ಮೆಘಾ ಎಕ್ಸ್ಚೇಂಜ್ ಮತ್ತು ಸಾಲಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟಿವಿಎಸ್ ಬ್ರಾಂಡ್ ನಮ್ಮ ದೇಶಿಯ ಕಂಪನಿಯಾಗಿದೆ. ಶತಮಾನದ ಇತಿಹಾಸ ಹೊಂದಿರುವ ಟಿವಿಎಸ್ ಗುಣಮಟ್ಟದ ವಾಹನ ಸೇವೆ ಬಂದಿದೆ. ಟಿವಿಎಸ್ ಕಂಪನಿಯ ಎಕ್ಸ್ಎಲ್ ಟಿವಿಎಸ್ ರೈತರ ,ಶ್ರಮಿಕರಿಗೆ , ಕಾರ್ಮಿಕ ವರ್ಗಕ್ಕೆ ಪ್ರೀತಿ ಪಾತ್ರವಾಗಿದೆ. ಪ್ರಸ್ತುತ ಯುವ ಸಮೂಹಕ್ಕೆ ವಿಭಿನ್ನ ಬೈಕ್ ಗಳನ್ನು ತರುವ ಮೂಲಕ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.
ಅತಿ ಕಡಿಮೆ ಸಮಯದಲ್ಲಿ ಅಹೋಬಲ ಟವಿಎಸ್ ಜನಸ್ನೇಹಿ ಮತ್ತು ಜನಪ್ರಿಯ ಶೋ ರೂಂ ಆಗಿ ಹೊರಹೊಮ್ಮಿದೆ. ಗ್ರಾಹಕರ ಮನೆ ಬಾಗಿಲಿಗೆ ಸರ್ವಿಸ್ ನೀಡುವ ಪ್ರಯತ್ನವನ್ನು ಜನರು ಇಷ್ಟಪಡುತ್ತಿದ್ದಾರೆ ಎಂದರು.
ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್ ಮಾತನಾಡಿ’ ಗ್ರಾಹಕರು ಎಲ್ಲ ಸಂದರ್ಭದಲ್ಲೂ ಶೋ ರೂಂಗೆ ಬಂದು ವಾಹನ ನೋಡುವ, ಪರಿಶೀಲಿಸಲು ಸಮಯ ಇರುವುದಿಲ್ಲ. ಇಂತಹ ಕಾರ್ನಿವಾಲ್ ನಲ್ಲಿ ಗ್ರಾಹಕರು ಉತ್ಸುಕತೆಯಿಂದ ಭಾಗವಹಿಸುತ್ತಾರೆ. ಈ ಕಾರಣಕ್ಕೆ ವಿಶೇಷ ಸಾಲ ಮತ್ತು ಎಕ್ಸ್ಚೇಂಜ್ ಮೇಳ ಡಿ.19 ರಿಂದ ಡಿ.23 ರ ತನಕ ನಡೆಯಲಿದೆ. ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿಯವರು ಕಾರ್ನಿವಲ್ ಗೆ ಚಾಲನೆ ನೀಡಿ ಹಾರೈಸಿದ್ದು ಸಂತೋಷ ತಂದಿದೆ’ ಎಂದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ನಗರಸಭೆ ಸದಸ್ಯ ಮಲ್ಲಿಕಾರ್ಜುನ್,
ಕಂಪನಿಯ ಪ್ರತಿನಿದಿಗಳಾದ ಟೇರಟರಿ ಮ್ಯಾನೇಜರ್ ಸಾಯಿಕೃಷ್ಣ, ಉಮಾ, ಮುತ್ತು, ಶ್ರೀ ಅಹೋಬಲ ಟಿವಿಎಸ್ ಜನರಲ್ ಮ್ಯಾನೇಜರ್ ವಿದ್ಯಾದರ್ ಮತ್ತು ಸಿಬ್ಬಂದಿ ಹಾಜರಿದ್ದರು..
+ There are no comments
Add yours