ಚಿತ್ರದುರ್ಗ:ಮಲೇಶಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸೀನಿಯರ್ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡ ಪ್ರಥಮ ಸ್ಥಾನ ಗಳಿಸಿದೆ. ಈ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ವೈಶಾಲಿ ಪ್ರಥಮ ಸ್ಥಾನ ಗಳಿಸಲು ಅದ್ಬುಟ ಆಟ ಪ್ರದರ್ಶಿಸಿದ್ದಾರೆ.ಈಕ್ರೀಡಾಪಟು ಕಡುಬಡ ಕುಟುಂಬದಲ್ಲಿ ಜನಿಸಿದ್ದೂ,ಮಲೇಶಿಯಾದಲ್ಲಿ ನಡೆದ ಪಂದ್ಯಾವಳಿಗೆ ತೆರಳಲು ಸಹ ತೀವ್ರ ಸಂಕಷ್ಟ ಎದುರಿಸಿದ್ದರು.ಆಗ ಹಿರಿಯೂರು ಶಾಸಕಿ ಪೂರ್ಣಿಮ ಹಾಗು ಅನೇಕ ಕ್ರೀಡಾಭಿಮಾನಿಗಳ ಸಹಕಾರದಿಂದ ಮಲೇಶಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಬಂಗಾರದ ಗರಿ ಗಳಿಸಿರೋದು ಕೋಟೆನಾಡಿನ ಕೀರ್ತಿಯನ್ನು ಹೆಚ್ಚಿಸಿದೆ..ಇವರ ಸಾಧನೆಗೆ ಪ್ರೋತ್ಸಾಹ ನೀಡಿದ ಕ್ರೀಡಾಪೋಷಕರು ಮತ್ತು ಮಲೇಶಿಯಕ್ಕೆ ತೆರಳಲು ಬೆನ್ನುಲುಬಾಗಿ ನಿಂತ ಸಹೋದರ ಗಿರೀಶ್ ಹಾಗೂ ಗುರುಗಳಾದ ಚಿದಾನಂದಸ್ವಾಮಿಯವರಿಗೆ ಕ್ರೀಡಾಪಟು ವೈಶಾಲಿ ಧನ್ಯವಾದ ಹೇಳಿದ್ದಾರೆ.
[t4b-ticker]
+ There are no comments
Add yours