ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ರಾಜಕೀಯ ವಿಭಿನ್ನ ಮತ್ತು ವಿಶೇಷ ಎಂದು ಬಿಂಬಿಸಬಹುದು. ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕದನ ಜೋರಾಗಿದೆ. ಹಿರಿಯರು ಕಿರಿಯರು ಎನ್ನದೇ ಎಲ್ಲಾರೂ ಪೈಪೋಟಿ ಮಾಡುತ್ತಿದ್ದು ಟಿಕೆಟ್ ಯಾರ ಪಾಲಾಗಲಿದೆ ಎಂಬುದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಪಕ್ಷಾಂತರ ಪರ್ವ ಆಗುತ್ತದೆ ಎಂದು ಎಲ್ಲಾ ಪಕ್ಷದ ಮುಖಂಡರು ಯಾರು ಎಲ್ಲಿಗೇ , ಯಾವ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಹೊಸ ಮುಖಕ್ಕೆ ಮಣೆ ಹಾಕುತ್ತದೆಯೋ ಅಥವಾ ಹಳೆ ಮುಖಕ್ಕೆ ಹಿರಿಯ ರಾಜಕಾರಣಿಗಳು ಎಂಬ ಬ್ರಾಂಡ್ ಎಂಬ ದಾಳ ಕಾಂಗ್ರೆಸ್ ಉರುಳಿಸುತ್ತದೆ ಎಂಬುದು ತಿಳಿಯಲು ಸ್ವಲ್ಪ ದಿನ ಕಾಯಲೇಬೇಕು.
ಚಿತ್ರದುರ್ಗ ಕ್ಷೇತ್ರ : ಎಂಎಲ್ಸಿ ರಘು ಆಚಾರ್, ಹನುಮಲಿ ಷಣ್ಮುಖಪ್ಪ, ತಾಜ್ ಪೀರ್,
ಚಳ್ಳಕೆರೆ : ಶಾಸಕ ಟಿ.ರಘುಮೂರ್ತಿ
ಮೊಳಕಾಲ್ಮುರು: ಎಸ್.ತಿಪ್ಪೇಸ್ವಾಮಿ
ಹಿರಿಯೂರು: ಡಿ.ಸುಧಾಕರ್, ಸೋಮಶೇಖರ್
ಹೊಳಲ್ಕೆರೆ: ಮಾಜಿ ಸಚಿವ ಹೆಚ್.ಆಂಜನೇಯ,ಮಾಜಿ ಜಿ.ಪಂ.ಸದಸ್ಯೆ ಸವಿತಾ ರಘು, ಜಿ.ಎಸ್.ಮಂಜುನಾಥ್.
ಹೊಸದುರ್ಗ:ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ
ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದು ಮುಂದಿನ ದಿನದಲ್ಲಿ ಯಾವ ಬದಲಾವಣೆಗಳು ಆಗುತ್ತವೆ ಎಂಬುದು ಕಾದು ನೋಡಬೇಕಿದೆ.
[t4b-ticker]
+ There are no comments
Add yours