ಚಳ್ಳಕೆರೆ-18 ರಾಷ್ಟ್ರೀಯ ಅಭಿವೃದ್ಧಿ ಪ್ರಧಾನಮಂತ್ರಿ ಮೋದಿಯವರ ಕೊಡುಗೆ ಹೆಚ್ಚಿದೆ. ವಿಶ್ವಮನ್ನಣೆ ಪಡೆದ ಏಕೈಕ ಪ್ರಧಾನ ಮೋದಿಯವರು ಅವರ ಸೇವಾ ಕಾರ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಎಲ್ಲರೂ ಮುಂದಾಗಬೇಕು ಎಂದು ಬಿಜೆಪಿ ಮುಖಂಡ ಎಂ.ಎಸ್.ಜಯರಾಂ ತಿಳಿಸಿದರು.
ಅವರು ತಾಲ್ಲೂಕಿನ ಉಪ್ಪಾರಹಟ್ಟಿ, ಹುಲಿಕುಂಟೆ, ಕಾಪರಹಳ್ಳಿ, ಜಡೇಕುಂಟೆ, ಸಾಣೀಕೆರೆ ಮುಂತಾದ ಗ್ರಾಮಗಳಲ್ಲಿ ಪಕ್ಷ ಸಂಘಟನೆ, ದೇವರ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಪಕ್ಷ ದೀನದಲಿತರ, ಬಡವರ ಪರವಾಗಿ ಕಾರ್ಯನಿರ್ವಹಿಸುವ ಪಕ್ಷವಾಗಿದೆ. ರೈತರ ಹಿತ ಕಾಯುವ ದೃಷ್ಟಿಯಿಂದ ಸಾವಿರಾರು ಕೋಟಿ ರೂಗಳ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ದಾವಿಸಿದ್ದಾರೆ.
ಬಿಜೆಪಿ ಪಕ್ಷದ ಬೆಳವಣಿಗೆಯನ್ನು ಸಹಿಸದ ಹಲವಾರು ಪಕ್ಷಗಳು ಬಿಜೆಪಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಇದ್ಯಾವುದು ಮತದಾರರ ಮೇಲೆ ಪ್ರಭಾವ ಬೀರದು. ಜನರಿಗೆ ಮೋದಿ ಮತ್ತು ಬೊಮ್ಮಾಯಿಯವರು ರಾಜ್ಯದ ಜನರಿಗೆ ನೀಡಿರುವ ಕೊಡುಗೆ, ಸೇವೆಯನ್ನು ಮನಗಂಡಿದ್ದಾರೆ. ಕಳೆದ ಮೂರು ವರ್ಷದಿಂದ ರಾಜ್ಯದ, ರಾಷ್ಟ್ರದ ಜನರಿಗೆ ನೀಡಿರುವ ಸೇವೆಯನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಪಕ್ಷದ ಬೆಳವಣಿಗೆ ಎಲ್ಲರೂ ಸಹಕರಿಸುವ ಮೂಲಕ ಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವತ್ತ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಹುಲಿಕುಂಟೆ ಗ್ರಾಮದ ಮುಖಂಡರಾದ ಮಲ್ಲಯ್ಯ, ಬಸವಲಿಂಗಪ್ಪ, ಮಲ್ಲಿಕಾರ್ಜುನ, ಹೊನ್ನಪ್ಪ, ಬೆಳಗೆರೆ ಗ್ರಾಮದ ಮುಖಂಡರಾದ ಸುನಂದಮ್ಮ, ರಘು, ಹನುಮಂತಪ್ಪ, ಸಣ್ಣಪ್ಪ, ಕಮಲಮ್ಮ, ಪಾಡುರಂಗಪ್ಪ, ರಮೇಶ, ಯಲಗಟ್ಟೆ ಗೊಲ್ಲರಹಟ್ಟಿಯ ಪೂಜಾರಿ ಜಯಣ್ಣ, ಸಿರಿಯಪ್ಪ ಗೌಡ,ಚನ್ನಕೇಶವ, ಉಪ್ಪಾರಹಟ್ಟಿ ಶ್ರೀನಿವಾಸ್, ಭಗವಂತಪ್ಪ, ಶ್ರೀನಾಥ, ನಾಗರಾಜು, ಈರಣ್ಣ, ಮರಿಕುಂಟೆ ಹೆಗ್ಗಡೆ ಮುಂತಾದವರು ಇದ್ದರು.
[t4b-ticker]
+ There are no comments
Add yours