ಬೆಂಗಳೂರು: ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡುವಾಗ ಮಾಜಿ ಸಿಎಂ ಯಡಿಯೂರಪ್ಪ ಸಹ ಜಾತಿಯ ಜೇನುಗೂಡಿಗೆ ಕೈ ಹಾಕಲು ಎದರಿ ಕೈ ಚಲ್ಲಿ ಬಿಟ್ಟರು. ಮೀಸಲಾತಿ ಕೊಡುವ ಗುಂಡಿಗೆ ಸಿಎಂ ಬೊಮ್ಮಾಯಿ ಅವರಿಗೆ ಇತ್ತು. ಎಲ್ಲಾ ಹೋರಟಗಳ ನಡುವೆ ಎಸ್ಸ ಎಸ್ಟಿ ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ದೇಶದಲ್ಲಿ ಬದ್ದತೆ ತೋರಿದ ಏಕೈಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಂದು ಹೇಳುತ್ತೇನೆ. ಶೋಷಿತರ ಪರ ಧ್ವನಿ ಎತ್ತಿ ಇತಿಹಾಸ ನಿರ್ಮಿಸಿದ್ದಾರೆ.157 ಜಾತಿಗಳ ಪರವಾಗಿ ಸಿಎಂ ಅವರು ಜಾತಿಯ ಜೇನು ಗೂಡು ಕಚ್ಚಿದರು ಪರವಾಗಿಲ್ಲ ಎಂಬ ದಿಟ್ಟ ನಿರ್ಧಾರ ಮಾಡಿ ಜಾತಿಗಳಿಗೆ ಮೀಸಲಾತಿ ನೀಡಿದ್ದಾರೆ. 10 ರಲ್ಲಿ 11 ಆಗದೇ ಧೈರ್ಯದಿಂದ ಐತಿಹಾಸಿಕ ನಿರ್ಧಾರ ಬೊಮ್ಮಾಯಿ ಮಾಡಿದ್ದಾರೆ.
[t4b-ticker]
+ There are no comments
Add yours