ಹಿರಿಯೂರು:( Hiriyur)10 -ಹಿರಿಯೂರು ನಗರದ ರಂಜಿತ್ ಹೋಟೆಲ್ ಸಭಾಂಗಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮಸ್ಕಲ್ ನಲ್ಲಿ ವ್ಯಾಸಂಗ ಮಾಡಿದ1972 ರಿಂದ 1979ನೇ ಸಾಲಿನ ಹಳೆ ವಿದ್ಯಾರ್ಥಿಗಳ ಗುರು ವಂದನಾ ಕಾರ್ಯಕ್ರಮ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಗುರುಗಳಾದ ಹನುಮಂತಪ್ಪನವರು ಮಾತನಾಡಿ ತಮ್ಮ ವಿದ್ಯಾರ್ಥಿಗಳು ಗುರುವಂದನ ಕಾರ್ಯಕ್ರಮವನ್ನು ಏರ್ಪಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಿವೃತ್ತ ಗುರುಗಳಾದ ತಿಪ್ಪೇರುದ್ರಪ್ಪನವರು ಮಾತನಾಡಿ ನಮ್ಮ ವಿದ್ಯಾರ್ಥಿಗಳು ನಮ್ಮ ಬಗ್ಗೆ ಗೌರವ ಇಟ್ಟು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಅಮೂಲ್ಯವಾದ ಕಾರ್ಯಕ್ರಮ ಎಂದರು. ನಿವೃತ್ತ ಗುರುಗಳಾದ ಈರಪ್ಪನವರು ಮಾತನಾಡಿ ಆಗಿನ ಗುರು-ಶಿಷ್ಯರ ಬಗ್ಗೆ(Guruvandane and gathering of friends)ಹೇಳಿದರು. ನಿವೃತ್ತ ಗುರುಗಳಾದ ಓಬಳಪ್ಪನವರು ಮಾತನಾಡುತ್ತಾ ಏಕಪಾತ್ರ ಅಭಿನಯ ಮಾಡಿ ಎಲ್ಲರಿಗೂ ರಂಜಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಾದ ಎಂ ಪಿ ಕಲ್ಯಾಣ್ ಕುಮಾರ್, ರಂಗಸ್ವಾಮಿ, ಮರಿಯಪ್ಪ ಇವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹನುಮಂತಪ್ಪ, ಸುಬ್ರಮಣ್ಯ, ತಿಪ್ಪೇಸ್ವಾಮಿ ಸೇರಿದಂತೆ ಆಗಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಗುರು ವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. (Hiriyur news)
[t4b-ticker]
+ There are no comments
Add yours